ಕೇದಾರೇಶ್ವರ ದೇವಾಲಯವು ಹಳೆಬೀಡಿನ ದೇವಾಲಯಗಳಲ್ಲಿ 'ಭೇಟಿ ಮಾಡಲೇಬೇಕಾದಂತಹ' ತಾಣ. ಇದನ್ನು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯ ಎರಡು ಹೊಯ್ಸಳ ಲಾಂಛನಗಳನ್ನು ಹೊಂದಿದೆ . ಆದ್ದರಿಂದ ಸುಂದರ ಮತ್ತು ಬೆರಗುಗೊಳಿಸುವಂತಹ ಎರಡೂ ವಾಸ್ತುಶಿಲ್ಪಗಳ ಶೈಲಿಗಳ ಮಿಶ್ರ ಪ್ರದರ್ಶನ ಇದಾಗಿದೆ. ದೇವಾಲಯವನ್ನು ಕ್ರಿಸ್ತಶಕ 1319 ರಲ್ಲಿ ನಿರ್ಮಿಸಿದ್ದರು ಆದರೆ ಅದು ಕುಸಿಯಿತು . ನಂತರ ಅದನ್ನು ಅದರ ಆರಂಭಿಕ ವೈಭವಕ್ಕೆ ತರಲು ಸಾಧ್ಯವಾಗಲೇ ಇಲ್ಲ ಎಂಬ ನಂಬಿಕೆ ಇದೆ.ಮನೋಹರವಾಗಿ ಕೆತ್ತಿದ ಗೋಡೆಗಳು ಮತ್ತು ಛಾವಣಿಗಳ ಹೊರತಾಗಿಯೂ ಗರಿಷ್ಠ ಮಿತಿಯಿಂದ, ಕೇದಾರೇಶ್ವರ ದೇವಾಲಯದ ನೆಲಮಾಳಿಗೆಯಲ್ಲಿ ಮಹಾಭಾರತ, ಭಗವದ್ಗೀತೆ, ಮತ್ತು ರಾಮಾಯಣದ ಕಥೆಗಳನ್ನು ಪ್ರದರ್ಶಿಸುವ ಕೆತ್ತನೆಯ ಅಲಂಕರಣಪಟ್ಟಿಗಳನ್ನು ಹೊಂದಿದೆ . ಪ್ರವಾಸಿಗರು ದೇವಾಲಯದ ಗರ್ಭಗುಡಿಯಲ್ಲಿ ಕೃಷ್ಣಶೀಲನಿಂದ ನಿರ್ಮಿತವಾದ ಕೇದಾರೇಶ್ವರ (ಶಿವ) ಲಿಂಗವನ್ನು ನೋಡಬಹುದು. ಉತ್ತರದಲ್ಲಿ ಜನಾರ್ಧನನ ಪ್ರತಿಮೆ ಇದ್ದರೆ , ದಕ್ಷಿಣ ಭಾಗದಲ್ಲಿ ಬ್ರಹ್ಮ ಲಿಂಗವನ್ನು ಹೊಂದಿದೆ .ಪ್ರವಾಸಿಗರು ದೇವಸ್ಥಾನದಲ್ಲಿ ಮೂರು ಶೃಂಗಗಳ ನೋಡಬಹುದು. ದೊಡ್ಡದು ಮಧ್ಯದಲ್ಲಿದ್ದರೆ ಚಿಕ್ಕವು ಅದರ ಎರಡೂ ಬದಿಯಲ್ಲಿ ಕಾಣಸಿಗುತ್ತವೆ . ಉಮಾ ಮಹೇಶ್ವರ, ಭೈರವ, ವರಾಹ, ತಾಂಡವೇಶ್ವರ ಮತ್ತು ಇತರ ದೇವರ ವಿಗ್ರಹಗಳು ಈ ಶೃಂಗದ ಹಿಂದಿನ ಕಥೆಯನು ವಿವರಿಸುತ್ತವೆ . ಈ ಶಿಲ್ಪಗಳು ಚಾಲುಕ್ಯರ ಕಲಾತ್ಮಕ ಸಾಧನೆಗಳು ಮತ್ತು ಸಾಂಸ್ಕೃತಿಕ ಹಿರಿಮೆಯ ನೈಜ ಚಿತ್ರಣವನ್ನು ಒದಗಿಸುತ್ತದೆ.