ಜೋಹರ್ ಕುಂಡ ಅತ್ಯಂತ ಮಹತ್ವದ ಐತಿಹಾಸಿಕ ಸ್ಥಳವಾಗಿದೆ. ಇದು ಮನ ಮಂದಿರ ಅರಮನೆಯ ಒಳಗಡೆ ಇದೆ. ಜೋಹರ್ ಎಂದರೆ ಆತ್ಮಹತ್ಯೆ. ಇಲ್ಲಿ 1232 ರಲ್ಲಿ ಇಲ್ತಮಿಷನು ಗ್ವಾಲಿಯರ್ನ್ನು ಆಕ್ರಮಿಸಿದಾಗ ರಜಪೂತ ವೀರರ ಪತ್ನಿಯರು ಈ ಕೊಳ ಅಂದರೆ ಕುಂಡಕ್ಕೆ ಸಾಮೂಹಿಕವಾಗಿ ಹಾರಿ ಅಥವಾ ಅತ್ಮಾಹುತಿ ನೀಡಿ ತಮ್ಮ ಪ್ರಾಣವನ್ನು ಬಲಿ ನೀಡಿದ್ದರು. ಗ್ವಾಲಿಯರ್ನ ರಾಜ ಸೋತ ನಂತರ ಬಹಳ ಮಹಿಳೆಯರು ಈ ಜೋಹರ್ ಕುಂಡ ಬಳಿ ಸತಿಯನ್ನು (ಆತ್ಮಾಹುತಿ) ಮಾಡಿದರು. ಈ ಕೊಳವನ್ನು ಮೂಲತಃ ಕೋಟೆಯ ಎಲ್ಲ ಕಡೆ ಸುತ್ತ ನೀರು ಸರಬರಾಜು ಒದಗಿಸಲು ಮಧ್ಯಯುಗದ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಲಾಗಿದೆ. ಐತಿಹಾಸಿಕವಾಗಿ ಇದು ಮಹಿಳೆಯರ ಮೇಲೆ ನಡೆಯುವ ಅಸಮಾನತೆ ಮತ್ತು ದಬ್ಬಾಳಿಕೆಯನ್ನು ಹೇಳುವ ಕಥೆಯಾಗಿದೆ.