ಗುರುದ್ವಾರ ದಾತಾ ಬಂದಿ ಛೋಡ್ ಇದು ಆರನೇಯ ಸಿಖ್ ಗುರು, ಗುರು ಹರ ಗೋಬಿಂದ್ ಸಾಹಿಬರ ಸ್ಮಾರಕವಾಗಿದೆ. ಇತಿಹಾಸದ ಪ್ರಕಾರ ಗುರು ಹರ ಗೋಬಿಂದ ಸಾಹಿಬರನ್ನು ಮೊಘಲ ದೊರೆ ಜಹಾಂಗಿರನು ಗ್ವಾಲಿಯರ್ ಕೋಟೆಯಲ್ಲಿ ಬಂಧಿಸಿಟ್ಟಿದ್ದನು. ಅವರು ಸುಮಾರು ಎರಡು ವರ್ಷಗಳ ಕಾಲ ಸೆರೆ ಮನೆಯಲ್ಲಿ ಇರಬೇಕಾಯಿತು. ಇವರು ತಮ್ಮ ಸೈನಿಕ ಚಟುವಟಿಕೆಗಳ ಕಾರಣದಿಂದಾಗಿ ಬಂಧನಕ್ಕೊಳಗಾಗ ಬೇಕಾಯಿತು. ನಂತರ ಇವರಿಗೆ ಬಿಡುಗಡೆಯ ಆದೇಶ ದೊರೆತಾಗ, ಇತರೆ ಹಿಂದು ರಾಜರಾದಂತಹ 52 ಜನ ಜೈಲುವಾಸಿಗಳನ್ನು ಬಿಡುಗಡೆ ಮಾಡಬೇಕೆಂದು ಕೇಳಿಕೊಂಡರು.
ಅದಕ್ಕೆ ಪ್ರತಿಯಾಗಿ ಜಹಾಂಗೀರನು ಯಾರು ಗುರುಗಳ ನಿಲುವಂಗಿಯನ್ನು ಹಿಡಿಯುತ್ತಾರೊ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂಬ ಆದೇಶವನ್ನು ನೀಡಿದನು. ಆದ್ದರಿಂದ ಈ ಗುರುಗಳು ದಾತ ಬಂದಿ ಛೋಡ್ ಎಂಬ ಹೆಸರನ್ನು ಪಡೆದರು. ಗುರು ಹರಗೋಬಿಂದ ಸಿಂಗರ ನೆನೆಪಿಗಾಗಿ ಗುರುದ್ವಾರ ದಾತಾ ಬಂದಿ ಛೋಡ್ ಅನ್ನು 1970 ರಲ್ಲಿ ನಿರ್ಮಿಸಲಾಯಿತು. ಇದು ದೇಶಾದ್ಯಂತ ಇರುವ ಸಿಖ್ಖರ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.