ಗುವಾಹಾಟಿಗೆ ಭೇಟಿ ನೀಡುವ ಯಾರೊಬ್ಬರೇ ಆಗಲಿ, ಅವಶ್ಯವಾಗಿ ನೋಡಲೇಬೇಕಾದ ಸ್ಥಳಗಳಲ್ಲೊಂದು ಶುಕ್ರೇಶ್ವರ ದೇವಾಲಯ. ಈ ದೇವಾಲಯವು ಭಗವಾನ್ ಶಿವನಿಗೆ ಅರ್ಪಿತವಾಗಿದ್ದು, ಇದು 1744 ರಲ್ಲಿ ಅಹೋಮ್ ದೊರೆ ಪ್ರಮತ್ತ ಸಿಂಹನಿಂದ ಕಟ್ಟಲ್ಪಟ್ಟಿತು. ಈ ದೇವಸ್ಥಾನದಲ್ಲಿ ರಾಜಾ ರಾಜೇಶ್ವರ್ ಸಿಂಹನ (1744–1751) ಕೊಡುಗೆಯನ್ನೂ ಕೂಡ ಕಾಣಬಹುದಾಗಿದ್ದು, ಅಸ್ಸಾಂ ನ ಇತಿಹಾಸದ ಒಂದು ಪ್ರಮುಖ ಅಧ್ಯಾಯವಾಗಿದೆ. ಶೈವಾರಾಧನೆಯ ಮಹತ್ವವನ್ನು ಈ ದೇವಸ್ಥಾವು ಸಾರುತ್ತದೆ. ಈ ದೇವಸ್ಥಾನವು ಸುಕ್ರೇಶ್ವರ್ ಅಥವಾ ಇಟಾಖುಲಿ ಬೆಟ್ಟದ ಮೇಲಿದೆ ಹಾಗೂ ಈ ಬೆಟ್ಟವು ಗುವಾಹಾಟಿಯ ಅತೀ ಪ್ರಮುಖ ಸ್ಥಳಗಳಲ್ಲೊಂದಾದ, ಪಾನ್ಬಜಾರ್ ನ ಸಮೀಪಕ್ಕೆ ಬ್ರಹ್ಮಪುತ್ರ ನದಿಯ ದಕ್ಷಿಣ ಭಾಗದಲ್ಲಿದೆ.
ಈ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಪಾಲಿಗೆ, ಬ್ರಹ್ಮಪುತ್ರ ನದಿಗಿರುವ ಅನೇಕ ಮೆಟ್ಟಿಲುಗಳು ಅಪ್ಯಾಯಮಾನವಾದ ತಾಣಗಳಲ್ಲೊಂದಾಗಿದೆ. ಇಲ್ಲಿಂದ ಪ್ರವಾಸಿಗರು ನದಿಯ ಕ್ಷಿತಿಜದ ಮೇಲೆ ಸೂರ್ಯಾಸ್ತಮಾನದ ವೈಭವವನ್ನು ಆನಂದಿಸಬಹುದು. ಈ ಸ್ಥಳವು ಯುವಕರು ಮತ್ತು ಹಿರಿಯರು, ಇವರೀರ್ವರ ನಡುವೆಯೂ ಜನಪ್ರಿಯ ತಾಣವಾಗಿದೆ. ಈ ದೇವಳದ ಕಲ್ಲುಗಳ ರಚನೆಯು, ಅಹೋಮ್ ಸಾಮ್ರಾಜ್ಯ ಕಾಲದಲ್ಲಿ ವ್ಯಾಪಕವಾಗಿದ್ದ, ವಾಸ್ತುಶಿಲ್ಪದತ್ತ ಒಂದು ಒಳನೋಟವನ್ನು ನೀಡುತ್ತದೆ.