ಗುಂಟೂರು ಜಿಲ್ಲೆಯಲ್ಲಿನ ಪುಟ್ಟ ನಗರವಾಗಿರುವ ಸೀತಾನಗರಂ ಭಾರತದ ಪೂರ್ವ ಕರಾವಳಿಯಲ್ಲಿದೆ. ಕೃಷ್ಣ ನದಿ ದಂಡೆ ಮೇಲಿರುವ ಸೀತಾನಗರಂ ಗುಂಟೂರಿನಿಂದ 18 ಮೈಲಿ ದೂರದಲ್ಲಿದೆ. 1.6 ಮಿಲಿಯನ್ ವರ್ಷಗಳ ಪೂರ್ವದಲ್ಲಿ ಅಂತ್ಯಗೊಂಡ ತ್ರೇತಾಯುಗದ ಸಮಯದಲ್ಲಿಯೇ ಸೀತಾನಗರವಿತ್ತು ಎಂದು ನಂಬಲಾಗುತ್ತದೆ. ಹಿಂದೂ ಪುರಾಣ ರಾಮಾಯಣದಲ್ಲಿ ಸೀತಾನಗರದ ಉಲ್ಲೇಖವಿದೆ.
ಸೀತಾನಗರದಲ್ಲಿ ಪ್ರಸಿದ್ದವಾದ ಸೋಮೇಶ್ವರ ಸ್ವಾಮಿ ದೇವಸ್ಥಾನವಿದೆ. ಐತಿಹ್ಯಗಳ ಪ್ರಕಾರ, ಭಗವಾನ್ ರಾಮನು ರಾವಣ ಸೀತೆಯನ್ನು ಕದ್ದೊಯ್ದದ್ದು ತಿಳಿದಾಗ ಇದೇ ದೇವಸ್ಥಾನದಲ್ಲಿ ಕಣ್ಣೀರು ಸುರಿಸುತ್ತ ಕುಳಿತಿದ್ದ. ಈ ಘಟನೆಗೆ ಪುರಾವೆ ಎಂಬಂತೆ ಸೀತೆಯ ಹೆಸರಿನಿಂದಲೇ ಈ ನಗರಕ್ಕೆ ಸೀತಾನಗರಂ ಎಂಬ ಹೆಸರು ಬಂದಿದೆ.
ದೇವಸ್ಥಾನವನ್ನು ಬಿಟ್ಟರೆ ಇನ್ನೊಂದು ಪ್ರಮುಖ ಕೇಂದ್ರ ವೇದಿಕ್ ವಿಶ್ವವಿದ್ಯಾಲಯ. ಜೀಯರ್ ಶಿಕ್ಷಣ ಟ್ರಸ್ಟ್ ನಿಂದ ನಡೆಸಲಾಗುತ್ತಿರುವ ಈ ಬಗೆಯ ವಿಶ್ವವಿದ್ಯಾಲಯ ದೇಶದಲ್ಲಿರುವುದು ಇದೊಂದೆ.