ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಸಂತ ರೋಶನ್ ಅಲಿ ಶಾ ರವರ ಸ್ಮರಣಾರ್ಥ ಈ ದರ್ಗಾವನ್ನು ನಿರ್ಮಿಸಲಾಗಿದೆ. ’ಧುನಿ’ ಎಂಬ ಅಗ್ಗಷ್ಟಿಕೆ ಅಂದಿನಿಂದಲೂ ಸತತವಾಗಿ ಉರಿಯುತ್ತಿದ್ದು ಅಲ್ಲಿಂದ ಏಳುವ ಹೊಗೆ ಪವಿತ್ರ ಎಂದು ಜನರು ನಂಬುತ್ತಾರೆ. ದರ್ಗಾದ ’ತಾಜಿಯಾ’ (ಪ್ರವಾದಿ ಹುಸೇನ್ ರ ಸಮಾಧಿಯ ಪ್ರತಿಕೃತಿ) ವನ್ನು ಚಿನ್ನ ಮತ್ತು ಬೆಳ್ಳಿ ಯನ್ನು ಬಳಸಿ ನಿರ್ಮಿಸಲಾಗಿದೆ. ನಗರ ಕೇಂದ್ರದಿಂದ ಸುಮಾರು ಎರಡು ಕಿ.ಮೀ. ದೂರವಿರುವ ಇಮಾಂಬಾರಾ ಪೀಠಕ್ಕೆ ಜನಾಬ್ ಅನಾನ್ ಫಾರೂಖ್ ಅಲಿ ಶಾ ರವರು ಇಂದಿನ ಧರ್ಮದರ್ಶಿಗಳಾಗಿದ್ದಾರೆ.