ಮಹಾಬಲೇಶ್ವರ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದು ಕರೆಯಲ್ಪಡುತ್ತದೆ ಇದಕ್ಕೆ ಕಾರಣ ಇಲ್ಲಿರುವ ಶಿವಲಿಂಗ ಇದರಿಂದ ಭಕ್ತರಲ್ಲಿ ಇದು ಜನಪ್ರಿಯವಾಗಿದೆ . ಈ ಧಾರ್ಮಿಕ ಕ್ಷೇತ್ರವನ್ನು ಕಾಶಿ ಅಥವಾ ವಾರಣಾಸಿಯ ಶಿವನ ದೇವಾಲಯಗಳಷ್ಟೇ ಪವಿತ್ರವಾದುದು ಎಂದು ಪರಿಗಣಿಸಲ್ಪಟ್ಟಿದೆ ಅದಲ್ಲದೆ ಪ್ರಸ್ತುತ ಏಳು ಮುಕ್ತಿಕ್ಷೇತ್ರಗಳಲ್ಲಿ ಇದು ಕೂಡಾ ಒಂದಾಗಿದೆ.
ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಬರುವ ಭಕ್ತರು ಮೊದಲು ಅರಬ್ಬೀ ಸಮುದ್ರದಲ್ಲಿ ಒಮ್ಮೆ ಜಳಕ ಮಾಡಿ ಬರುವುದು ಇಲ್ಲಿನ ರೂಢಿ. ಬಿಳಿ ಗ್ರಾನೈಟ್ ಕಲ್ಲುಗಳನ್ನು ಬಳಸಿ ತಯಾರಿಸಲಾಗಿರುವ ಈ ರಚನೆಯು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಪ್ರತಿನಿಧಿಸುತ್ತದೆ.ದೇವಸ್ಥಾನ ತಲುಪಿದ ನಂತರ, ಪ್ರವಾಸಿಗರು ಮಧ್ಯ ಭಾಗದಲ್ಲಿ ರಂದ್ರವುಳ್ಳ ಚೌಕಾಕಾರದ ಸಾಲಿಗ್ರಾಮ ಪೀಠದಲ್ಲಿ ಶಿವಲಿಂಗವನ್ನು ಸ್ಥಾಪಿಸಿರುವುದನ್ನು ಗಮನಿಸಬಹುದು . ಈ ಕೇಂದ್ರಭಾಗದಲ್ಲಿನ ರಂದ್ರ ಶಿವಲಿಂಗವನ್ನು ಮೇಲಿನಿಂದ ವೀಕ್ಷಿಸಲು ಭಕ್ತರಿಗೆ ಸುಲಭವಾಗಿಸುತ್ತದೆ . ಇದಲ್ಲದೆ ಈ ದೇವಾಲಯದಲ್ಲಿ 1500 ವರ್ಷದ ಹಿಂದಿನ ಕಲ್ಲಿನಿಂದ ಕೆತ್ತಿದ ಶಿವನ ಒಂದು ಆಕೃತಿಯಿದೆ . ಹಿಂದೂ ಧರ್ಮದ ಜನರ ತಮ್ಮ ಮೃತ ಸಂಬಂಧಿಕರ ಅಂತಿಮ ಆಚರಣೆಗಳನ್ನು ಕೈಗೊಳ್ಳಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ . ಈ ಲಿಂಗದ ದರ್ಶನ ಪಡೆದವರಿಗೆ ಆಶೀರ್ವಾದದ ತುಂತುರುವಾಗುತ್ತದೆ ಎಂಬುದು ನಂಬಿಕೆ . ಮಹಾಬಲೇಶ್ವರ ದೇವಸ್ಥಾನವು ಶಿವರಾತ್ರಿಯ ಸಂದರ್ಭದಲ್ಲಿ ನೂರಾರು ಭಕ್ತರಿಂದ ತುಂಬಿ ತುಳುಕುತ್ತದೆ.