ದೌಲನ ಎಂಬ ಐತಿಹಾಸಿಕ ಹಿನ್ನಲೆಯುಳ್ಳ ಹಳ್ಳಿಯು ಮೀರತ್- ಹಪುರ್ - ಬುಲಂದ್ಶಹರ್ ರಸ್ತೆಯಲ್ಲಿರುವ ಗುಲೊತಿ ಎಂಬಲ್ಲಿ ನೆಲೆಗೊಂಡಿದೆ. ಇದು ಘಜಿಯಾಬಾದ್ನಿಂದ 23 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಜನಪದ ಕತೆಯ ಪ್ರಕಾರ, ಈ ಹಳ್ಳಿಯನ್ನು ರಜಪೂತ್ ಪಾಳೆಗಾರನಾದ ಧೋಲ್ ಸಿಂಗ್ ಶಿಶೋಡಿಯನು ನಿರ್ಮಿಸಿದನು. ಈತನು ಈ ಹಳ್ಳಿಗೆ ತನ್ನದೇ ಹೆಸರನ್ನು ಇಟ್ಟನು. 1780ರಲ್ಲಿ ಈ ಊರಿನ ಮೇಲೆ ಆಕ್ರಮಣ ಮಾಡಿದ ಸಿಕ್ಕರು, ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
1857ರಲ್ಲಿ ಆರಂಭವಾದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಮದಲ್ಲಿ ಈ ಊರು ಭಾರೀ ಹೆಸರನ್ನು ಸಂಪಾದಿಸಿತು. ಲಾಲಾ ಜನ್ಮುಖ್ಲಾಲ್ ಎಂಬಾತನ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರೆಂಬ ಕಾರಣಕ್ಕೆ, ಈ ಊರಿನ 14 ಮಂದಿ ರಜಪೂತ ನಿವಾಸಿಗಳನ್ನು ಬ್ರಿಟೀಷ್ ಸರ್ಕಾರ ಗಲ್ಲಿಗೇರಿಸಿತು.
ಇದಕ್ಕೆ ಕೃತಙ್ಞತೆಯನ್ನು ಸಲ್ಲಿಸುವ ಸಲುವಾಗಿ ಈ ಊರಿನ ನಿವಾಸಿಗಳು ಶಹೀದ್ ಸಮರಕಸ್ ಎಂಬ ಸ್ಮಾರಕವನ್ನು 1957ರಲ್ಲಿ ನಿರ್ಮಿಸಿ. ಅಗಲಿದ ಹುತಾತ್ಮರ ಶತಮಾನದ ಪುಣ್ಯ ಸ್ಮರಣೆಯನ್ನು ಅದ್ಧೂರಿಯಾಗಿ ಆಚರಿಸಿದರು.
ಸತಿ ಮಾಲಿಂದಿ ದೇವಿಗೆ ಸಮರ್ಪಿಸಲಾಗಿರುವ ದೇವಾಲಯವನ್ನು ಸಹ ನಾವಿಲ್ಲಿ ನೋಡಬಹುದು. ಈ ದೇವಾಲಯವು ಸ್ಥಳೀಯ ಭಕ್ತಾಧಿಗಳ ವಲಯದಲ್ಲಿ ಭಾರೀ ಆದರಕ್ಕೆ ಪಾತ್ರವಾಗಿದೆ. ಪ್ರತಿ ವರ್ಷ ನಡೆಯುವ ಜಾತ್ರೆಯು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳನ್ನು ಆಕರ್ಷಿಸುತ್ತಿರುತ್ತದೆ.