ದಾದ್ರಿ ಎಂಬ ನಗರವು ಉತ್ತರ ಪ್ರದೇಶದಲ್ಲಿರುವ ಗೌತಮ್ ನಗರ್ ಬಳಿ ನೆಲೆಗೊಂಡಿದೆ. ಈ ನಗರವು 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಣನೀಯ ಕೊಡುಗೆ ನೀಡಿದೆ. ಆಗ ಈ ಪ್ರದೇಶವನ್ನು ಆಳುತ್ತಿದ್ದ, ಗುರ್ಜರ್ ಸಮುದಾಯದ ಪಾಳೆಗಾರನಾದ ರಾಜಾ ಉಮ್ರಾವ್ ಸಿಂಗ್ ಮತ್ತು ಇತರ ಗುರ್ಜರ್ ಪಾಳೆಯಗಾರರು ಬ್ರಿಟೀಷ್ ಸರ್ಕಾರದ ವಿರುದ್ಧ ದಂಗೆಯೆದ್ದರು. ಅನಂತರ ಈತನನ್ನು ಮತ್ತು ಇನ್ನಿತರ ನಾಲ್ಕು ಅನುಯಾಯಿಗಳನ್ನು ಬ್ರಿಟೀಷ್ ಸೇನೆ ಗಲ್ಲಿಗೇರಿಸಿತು.
ಈ ನಗರವು ರಾಷ್ಟ್ರೀಯ ಶಾಖೋತ್ಪನ್ನ ಶಕ್ತಿ ನಿಗಮ ನಡೆಸುವ ಒಂದು ವಿದ್ಯುತ್ ಶಕ್ತಿ ಕೇಂದ್ರಕ್ಕು ಸಹ ಹೆಸರುವಾಸಿಯಾಗಿದೆ.