ಜೌಗಡ ಇದು ಬೇಹ್ರಮಪುರದಿಂದ 35 ಕೀಲೊ ಮೀಟರ ದೂರದಲ್ಲಿದೆ. ಈ ಪ್ರದೇಶವು ಮೌರ್ಯರ ಅವಧಿಗೆ ಸೇರಿದ ಎನ್ನಲಾದ ಪ್ರಾಚೀನ ಅವಶೇಷಗಳ ನೆಲೆಯಾಗಿ ಪ್ರಸಿದ್ಧವಾಗಿದೆ. ಇಲ್ಲಿ ಮೌರ್ಯರ ಅವಧಿಗೆ ಸೇರಿದ ಕೆಲವು ಭಗ್ನಗೊಂಡ ಶಿಲಾಶಾಸನಗಳು ದೊರೆತಿವೆ. ಜೌಗಡ ಋಷಿಕುಲ್ಯ ಎಂಬ ನದಿಯ ತೀರದ ಮೇಲೆ ನೆಲೆಗೊಂಡಿದೆ. ಆದ್ದರಿಂದ ಋಷಿಕುಲ್ಯ ಕಣಿವೆಯ ನಾಗರಿಕತೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳ ಅಪಾರವು ಸಂಗ್ರಹವು ಇಲ್ಲಿ ಲಭ್ಯವಾಗಿದೆ. ಇಲ್ಲಿರುವ ಕೋಟೆಯು ಆಯತಕಾರದಲ್ಲಿದ್ದು ಇದು ಈಗ ಅವಶೇಷ ಸ್ಥಿತಿಯಲ್ಲಿದೆ. ಇದು ಈ ಸ್ಥಳದ ಐತಿಹಾಸಿಕತೆಗೆ ಸಾಕ್ಷಿಯಾಗಿದೆ.
ಈ ಕೋಟೆಯ ಗೋಪುರಗಳು ಮತ್ತು ಗೋಡೆಯನ್ನು ಮಣ್ಣಿನಿಂದ ನಿರ್ಮಿಸಲಾಗಿದ್ದು, ಅದರ ಅವಶೇಷಗಳನ್ನು ಇಂದಿಗೂ ಇಲ್ಲಿ ಕಾಣಬಹುದು. ಇಲ್ಲಿ ದೊರೆತಿರುವ ಕಲ್ಲಿನ ಶಿಲಾ ಶಾಸನಗಳು ಭಾರತದ ಪುರಾತತ್ವ ಇಲಾಖೆಯ ಗಮನವನ್ನು ಸೆಳೆದಿವೆ. ಪ್ರಸಿದ್ಧ ದೇವಾಲಯವಾದ ಕಾಲೇಶ್ವರ ಮತ್ತು ರಾಮೇಶ್ವರ ಈ ಸ್ಥಳಕ್ಕೆ ಹತ್ತಿರದಲ್ಲಿದೆ. ಈ ದೇವಾಲಯದ ಒಂದು ವಿಶಿಷ್ಟತೆ ಎಂದರೆ ಈ ದೇವಸ್ಥಾನದ ದೇವತೆಗಳಾದ ಶಿವ ಮತ್ತು ವಿಷ್ಣು ದೇವರುಗಳನ್ನು ಒಟ್ಟಾಗಿ ಒಂದೇ ಸ್ಥಳದಲ್ಲಿ ಕಾಣಬಹುದು. ಇಂತಹ ಅಪರೂಪದ ದೇವಾಲಯ ಇದಾಗಿದೆ.