ಅಕ್ಷರಧಾಮ ಗುಜರಾತ್ ನ ದೊಡ್ಡ ದೇವಸ್ಥಾನಗಳಲ್ಲಿ ಒಂದು. ಇದು ಭಕ್ತಿ, ವಾಸ್ತು, ಕಲೆ ಹಾಗೂ ವಸ್ತುಪ್ರದರ್ಶನ ಗಳ ಒಂದು ಅಪೂರ್ವ ಸಂಗಮವಾಗಿದೆ. ಸ್ವಾಮಿನಾರಾಯಣ ವಿಗ್ರಹವು ಇಲ್ಲಿನ ಪೂಜಾಮೂರ್ತಿಯಾಗಿದೆ. ಗಾಂಧೀನಗರಕ್ಕೆ ಭೇಟಿ ನೀಡುವ ಯಾತ್ರಿಗಳು ಈ ಸ್ಮಾರಕದ ಸೌಂದರ್ಯ ಸವಿಯಲು ಹಾಗೂ ದೇವರ ದರ್ಶನ ಮಾಡಲು ಇಲ್ಲಿಗೆ ಭೇಟಿ ನೀಡುತ್ತಾರೆ. ಅಕ್ಷರಧಾಮದ ಟ್ಯಾಗ್ ಲೈನ್ ಹೀಗಿದೆ "ಇಲ್ಲಿ ಕಲೆ ಅಜರಾಮರ, ಸಂಸ್ಕೃತಿಗೆ ಸೀಮೆಗಳಿಲ್ಲ, ಮತ್ತು ಮೌಲ್ಯ ಶಾಶ್ವತ"