ಕೋಟುಮಚಗಿಯತ್ತ ತೆರಳುತ್ತಿರುವ ಪ್ರವಾಸಿಗರು ಹಜರತ್ - ಜಿಂದಾಶಾ - ಅಲಿ ದರ್ಗಾ ಮತ್ತು ದುರ್ಗಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ. ಈ ಪ್ರದೇಶದ ಹಿಂದು ಮತ್ತು ಮುಸ್ಲಿಮ್ ಸಮುದಾಯದವರು ಈ ಎರಡೂ ಪೂಜ್ಯ ಸ್ಥಳಗಳನ್ನು ಯಾವುದೇ ಕೋಮು ಗಲಭೆಯಿಲ್ಲದೆ ಅತ್ಯಂತ ಸೌಹಾರ್ದತೆಯಿಂದ ನಿರ್ವಹಿಸುತ್ತಿದ್ದಾರೆ. ಇಷ್ಟೆ ಅಲ್ಲದೆ ಪ್ರಾಚಿನ ಕವಿ ಚಾಮರಸನು ಈ ಪ್ರದೇಶದಲ್ಲಿರುವ ಸರೋವರದ ಬಳಿಯೆ ಕುಳಿತು ತನ್ನ ಪ್ರಸಿದ್ಧ ಕೃತಿಯಾದ 'ಪ್ರಭುಲಿಂಗಲಿಲೆ' ಯನ್ನು ರಚಿಸಿದ್ದಾನೆಂದು ಹೇಳಲಾಗುತ್ತದೆ.