ಮಾತಾ ಚಕ್ರೇಶ್ವರಿ ದೇವಸ್ಥಾನವು ಸಿರಹಿಂದ ಮತ್ತು ಚಂದಿಘರ ದಾರಿಯ ಮಧ್ಯದಲ್ಲಿ ಬರುವ ಅತ್ತೆವಾಲಿ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ದಂತಕಥೆಯಾದ ಮಾತಾ ಚಕ್ರೇಶ್ವರಿ ದೇವಿಯು ರಾಜಾ ಪೃಥ್ವಿ ರಾಜ ಚವ್ಹಾಣರ ಕಾಲಾವಧಿಯಲ್ಲಿ ನೆಲೆಸಿದ್ದರು. ಒಂದು ಸಲ ಕೆಲವು ಯಾತ್ರಿಕರು ಎತ್ತಿನ ಗಾಡಿಯಲ್ಲಿ ಜೈನ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟಿದ್ದರು. ಅವರು ದಾರಿಯ ಮಧ್ಯದಲ್ಲಿ ಮಾತಾ ಚಕ್ರೇಶ್ವರಿ ದೇವಿಯ ವಿಗ್ರಹವನ್ನು ತೆಗೆದುಕೊಂಡರು. ಮಾತಾ ಚಕ್ರೇಶ್ವರಿ ದೇವಿಯು ಭಗವಾನ ತೀರ್ಥಂಕರ ಆದಿನಾಥರ ಕಟ್ಟಾ ಅನುಯಾಯಿಗಳಾಗಿದ್ದರು.
ಆ ದಿನ ಯಾತ್ರಿಕರು ಈ ಸ್ಥಳದಲ್ಲಿಯೇ ವಾಸ್ತವ್ಯ ಹೂಡಿ, ಮರು ದಿನ ಪ್ರಯಾಣ ಬೆಳೆಸಲು ಇಚ್ಚಿಸಿದಾಗ ಆ ಎತ್ತಿನ ಗಾಡಿಯು ಮುಂದೆ ಹೋಗಲಿಲ್ಲವಂತೆ. ಆ ಎತ್ತಿನ ಗಾಡಿಯಲ್ಲಿ ಮಾತಾ ಚಕ್ರೇಶ್ವರಿ ದೇವಿಯ ವಿಗ್ರಹವಿತ್ತು. ಅದು ಕೂಡ ಆ ಸ್ಥಳದಿಂದ ಅಲುಗಾಡಲಿಲ್ಲವಂತೆ. ಆಗ ಕೂಡಲೇ ಆಕಾಶದಿಂದ “ ಈ ಸ್ಥಳ ನಾನು ವಾಸಿಸುವ ನೆಲೆಯಾಗಲಿ“ಎಂಬ ಧ್ವನಿ ಕೇಳಿತು. ವಿಚಿತ್ರವೆಂದರೆ ಆಗ ಬಂಜರು ಭೂಮಿಯಾಗಿದ್ದ ಈ ಸ್ಥಳದಲ್ಲಿ ನೀರಿನ ಕಾರಂಜಿ ಉದ್ಭವಿಸಿತು ಎಂಬ ನಂಬಿಕೆ ಇದೆ. ಪ್ರತಿ ವರ್ಷ ದಸರಾ ಹಬ್ಬವು ಮುಗಿದ ನಂತರ ಮುಂದಿನ ನಾಲ್ಕನೇ ದಿನದಲ್ಲಿ ಇಲ್ಲಿ ಒಂದು ಧಾರ್ಮಿಕ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಈ ಸಮಾರಂಭದಲ್ಲಿ ಅಸಂಖ್ಯಾತ ಭಕ್ತರು ಭಾಗವಹಿಸುತ್ತಾರೆ.