ಆಮ್ ಖಾಸ್ ಬಾಗ್ ಅನ್ನು ಮೊಘಲ ದೊರೆ ಬಾಬರನು ನಿರ್ಮಿಸಿದ್ದು, ಇದು ಹೆದ್ದಾರಿಯಲ್ಲಿ ಕಂಡು ಬರುತ್ತದೆ. ಈಗ ಇದೊಂದು ಅವಶೇಷದ ಸ್ಥಳವಾಗಿದ್ದು, ಬಾಬರನ ನಂತರ ಷಾಹಜಾನನು ಇದನ್ನು ಮರು ನವೀಕರಿಸಿದ್ದನು. ಇಲ್ಲಿ ಅನೇಕ ರಾಜರುಗಳು ಅಂದಿನ ಕಾಲದಲ್ಲಿ ಲಾಹೋರಿಗೆ ತೆರಳುವಾಗ ಇಲ್ಲಿಗೆ ಬಂದು ವಿಶ್ರಮಿಸುತ್ತಿದ್ದರು. ಆಮ ಖಾಸ್ ನಲ್ಲಿ ಸರದ ಖಾನಾ ಎಂಬ ಹವಾ ನಿಯಂತ್ರಿತ ವ್ಯವಸ್ಥೆಯಿತ್ತು. ಇದು ಆಮ ಖಾಸ್ ಸಂಕೀರ್ಣದ ಗಮನ ಸೆಳೆಯುವ ವಿಷಯವಾಗಿದೆ. ದೌಲತ್ – ಖಾನಾ – ಈ ಖಾಸ್ ಅಥವಾ ಶೀಶ್ ಮಹಲ್ ಇದು ಆಮ ಖಾಸ್ ಬಾಗ್ ಸಂಕೀರ್ಣದಲ್ಲಿರುವ ಒಂದು ಸುಂದರ ಸ್ಮಾರಕವಾಗಿದೆ. ಇದು ಅಲಂಕೃತ ಗೋಡೆಗಳು, ಮಸೀದಿ ಸ್ತಂಭ ಗೋಪುರಗಳು, ತೊಟ್ಟಿಗಳು, ಕಾರಂಜಿಗಳು ಮತ್ತು ಸುಂದರ ಮೆರುಗು ಅಂಚುಗಳಿಂದ ಕೂಡಿದ ಗೋಪುರಗಳನ್ನು ಒಳಗೊಂಡಿದೆ.
ಸ್ನಾನ ಗೃಹವಾದ ಹಮಾಮ್ ಅನ್ನು ಸಹ ಬಿಸಿ ನೀರಿಗಾಗಿ ನೆಲದ ಒಳಗಡೆ ವಿಶೇಷ ಟೆರ್ರಿಕೋಟ ಕಾಲುವೆಗಳನ್ನು ನಿರ್ಮಿಸುವ ಮೂಲಕ ಕೌಶಲ್ಯಪೂರ್ಣವಾಗಿ ನಿರ್ಮಿಸಲಾಗಿದೆ. ಪ್ರತಿವರ್ಷ ಶಾಹೀದಿ ಜೋರ ಮೇಳದ ಸಮಯದಲ್ಲಿ ಸಿರಹಿಂದ ದಿ ದಿವಾರ ಎಂದು ಕರೆಯಲ್ಪಡುವ ಬೆಳಕು ಮತ್ತು ಧ್ವನಿಯ ನಾಟಕವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಪ್ರದರ್ಶನವನ್ನು ಪ್ರವಾಸಿಗರು ನೋಡಲೇ ಬೇಕು. ಇದು ತುಂಬಾ ಆಕರ್ಷಕ ರೀತಿಯಲ್ಲಿ ಸಿಖ್ಖ ಹುತಾತ್ಮರ ತ್ಯಾಗ, ಇತಿಹಾಸದ ಕುರಿತು ಮಾಹಿತಿಯನ್ನು ಒದಗಿಸುತ್ತದೆ.