ನವಾಬ್ ಕಪುರ ಸಿಂಗ್ನಿಂದ ನಿರ್ಮಾಣಗೊಂಡು, ಅವನ ಹೆಸರಿನಿಂದಲೆ ಗುರುತಿಸಲ್ಪಡುವ ಕೊಟ್ಕಪುರವು " ಶ್ವೇತ ಚಿನ್ನದ ನಗರ" ( ಸಿಟಿ ಆಫ್ ವೈಟ್ ಗೋಲ್ಡ್) ಎಂದು ಕರೆಯಲ್ಪಡುತ್ತದೆ. ಕಾರಣ ಇಲ್ಲಿರುವ ಅತಿ ದೊಡ್ಡ ಹತ್ತಿಯ ಮಾರುಕಟ್ಟೆಯು ವಿಶ್ವದಲ್ಲಿಯೇ ಅದ್ವಿತೀಯವೆಂಬ ಕೀರ್ತಿಗೆ ಪಾತ್ರವಾಗಿದೆ. ಹಾಗಾಗಿ ಈ ನಗರಕ್ಕೆ ಈ ಅಭಿದಾನ ಬಂದಿದೆ. 1875ರಲ್ಲಿ ಮಹೇಶ್ವರಿ ಕುಟುಂಬದವರಿಂದ ಸ್ಥಾಪನೆಗೊಂಡ ಇಲ್ಲಿನ ಮಾರುಕಟ್ಟೆಯು, ಶಾಸ್ತ್ರೀ ಮಾರುಕಟ್ಟೆ ಅಥವಾ ಮಹೇಶ್ವರಿ ರಸ್ತೆಯೆಂದೆ ಗುರುತಿಸಲ್ಪಡುತ್ತದೆ.
ಸದಾ ಜನಜಂಗುಳಿಯಿಂದ ಕೂಡಿರುವ ಈ ಮಾರುಕಟ್ಟೆಯು ಫರೀದ್ಕೋಟ್ನ ಮುಖ್ಯ ಆಕರ್ಷಣೆಯಾಗಿದೆ. ಈ ನಗರವು ಕೋಟೆಗಳಿಂದ ಕೂಡಿದ್ದು, ಪ್ರವಾಸಿಗರು ಸುತ್ತಾಡಲು ಹಲವಾರು ಸ್ಥಳಗಳನ್ನು ಹೊಂದಿದೆ. ಗುರು ಗೋವಿಂದ್ ಸಿಂಗ್ ಮತ್ತು ನವಾದ್ ಕಪುರ ಸಿಂಗ್ರವರ ಜೀವನವನ್ನು ಅರಿತುಕೊಳ್ಳಲು ಬಯಸುವವರು ಒಮ್ಮೆಯಾದರು ಫರೀದ್ಕೋಟ್ಗೆ ಭೇಟಿ ನೀಡಬೇಕು. ಈ ಊರಿನಲ್ಲಿ ದುರ್ಗಾ ಮಂದಿರ್, ಗುರುದ್ವಾರ ಗೋದಾವರಿ ಸರ್ ಪಟ್ಶಾಹಿ, ಶಿವ್ ಗುಫಾ ಮಂದಿರ್ ಮತ್ತು ಶ್ರೀ ರಾಧಾ ಕೃಷ್ಣ ಮಂದಿರಗಳೆಂಬ ಧಾರ್ಮಿಕ ಆಕರ್ಷಣೆಗಳು ಇವೆ. ಇವುಗಳ ಜೊತೆಗೆ ಕೊತೆ ದ ವಲೆ, ಸಂಧ್ವಾನ್, ಧಿಲ್ವಾನ್ ಕಲನ್, ಪಂಜ್ಗ್ರೈಯನ್ ಕಲನ್, ಘನಿಯನ್ ವಾಲಾ, ಹರಿ ನೌ, ಮಧಕ್, ಖಾರಾ ಮತ್ತು ಮಟ್ಟಗಳೆಂಬ ಸ್ಥಳಗಳನ್ನು ಸಹ ಪ್ರವಾಸಿಗರು ನೋಡಬಹುದು.