ನಟದೀಶ್ವರ ದೇವಾಲಯ ಈರೋಡ್ ನ ಒಂದು ಪ್ರಮುಖ ಸ್ಥಳ. ಕಾವೇರಿ ನದಿಯ ದಡದಲ್ಲಿರುವ ಕಾರಣ ಇದನ್ನು ಒಂದು ಅತ್ಯಂತ ಪವಿತ್ರ ದೇವಾಲಯ ಎಂದು ಗುರುತಿಸಲಾಗಿದೆ. ಇದನ್ನು ಚೋಳ ರಾಜರು ಕಟ್ಟಿಸಿದ್ದರು ಹಾಗೂ ಇದರ ಇತಿಹಾಸ ಮುನ್ನೂರು ವರ್ಷಗಳಿಗೂ ಹೆಚ್ಚಿನದಾಗಿದೆ. ಇದನ್ನು ಅಗಸ್ತೇಶ್ವರ ಎಂದೂ ಕರೆಯಲಾಗುತ್ತದೆ. ವಾಸ್ತುಶಿಲ್ಪದ ದೃಷ್ಟಿಯಿಂದಲೂ ಪ್ರಸಿದ್ಧವಾಗಿರುವ ಈ ದೇವಾಲಯ ದಕ್ಷಿಣ ಭಾರತದ ವಾಸ್ತುಶಿಲ್ಪದ ಶೈಲಿಯನ್ನು ಪ್ರತಿನಿಧಿಸುತ್ತದೆ. ಈ ದೇವಸ್ಥಾನವನ್ನು ಸರಳವಾಗಿ ತಲಿಪಬಹುದಾಗಿದ್ದು, ರಾಜ್ಯದ ಇತರೆ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಗೆ ಬಸ್ಸಿನ ಮೂಲಕ ಮಾತ್ರವಲ್ಲದೆ ನದಿಯ ಮೂಲಕವೂ ತಲುಪಬಹುದಾಗಿದೆ. ಇಲ್ಲಿಗೆ ಪ್ರವೇಶಿಸುತ್ತಿದ್ದಂತೆಯೆ ಮನದಲ್ಲಿ ಪೂಜ್ಯ ಭಾವ ತನ್ನಿಂದ ತಾನೇ ನಿಮ್ಮಲ್ಲಿ ಬರುತ್ತದೆ.