ಈರೋಡ್ ಜಿಲ್ಲೆಯ ಒಂದು ಗ್ರಾಮ ಪಂಚಾಯತ್ ಕೊಡುಮುಡಿಯಾಗಿದೆ. ಇಲ್ಲಿನ ಜನಸಂಖ್ಯೆ ಹನ್ನೆರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದ ತಾಣವಾಗಿದೆ. ಈ ಗ್ರಾಮವು ಸಮುದ್ರ ಮಟ್ಟದಿಂದ ನೂರ ನಲವತ್ತನಾಲ್ಕು ಮೀಟರ್ ಎತ್ತರದಲ್ಲಿದೆ. ಈ ರಾಜ್ಯದ ಜನತೆ ಇದನ್ನು ಕಾಶ್ಮೀರದ ಶಿಖರಗಳಲ್ಲೊಂದು ಎಂಬುದಾಗಿ ನಂಬುತ್ತಾರೆ.
ಇದು ಕಾವೇರಿ ನದಿಯ ದಡದಲ್ಲಿರುವ ಒಂದು ಗ್ರಾಮವಾಗಿದೆ. ಇಲ್ಲಿ ಜರುಗುವ ಬ್ರಹ್ಮಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಜನರು ಬರುತ್ತಾರೆ. ದೀಪಗಳನ್ನು ಹಚ್ಚಿ ಅವುಗಳನ್ನು ನದಿಯಲ್ಲಿ ತೇಲಿಬಿಡಲಾಗುತ್ತದೆ. ಈ ಗ್ರಾಮವನ್ನು ಹೊಗಳುವಂತಹ ಹಲವಾರು ಸಾಹಿತ್ಯ ಕೃತಿಗಳಿವೆ. ಈ ಗ್ರಾಮಕ್ಕೆ ಶ್ರೇಷ್ಠ ಕಲಾ ಮೌಲ್ಯದ ಜೊತೆಗೆ ಪೌರಾಣಿಕ ಮೌಲ್ಯವಿದೆ. ಇದು ಕಾವೆರಿ ನದಿಯ ದಡದಲ್ಲಿರುವ ಕಾರಣ ಇದನ್ನು ಸಾಂಪ್ರದಾಯಿಕ ಮಹತ್ವದ ಊರೆಂದು ನಂಬಲಾಗಿದೆ. ಚಿತ್ತಿರೈ ಹಾಗೂ ಅವನಿ ಉತ್ಸವಗಳನ್ನು ಈ ಊರಿನಲ್ಲಿ ಆಚರಿಸಲಾಗುತ್ತದೆ.