ತನ್ನ ಜೊತೆಗೆ ದೊಡ್ಡ ಇತಿಹಾಸವನ್ನು ಹೊಂದಿರುವ ದೇವಾಲಯ ಕಸ್ತೂರಿ ಅರಂಗನಾಥರ್ ದೇವಾಲಯ. ಈರೋಡಿನಲ್ಲಿರುವ ದೇವಸ್ಥಾನಗಳಲ್ಲಿ ಹೆಚ್ಚು ಪವಿತ್ರವಾದ ಹಾಗೂ ಸುಂದರವಾದ ದೇವಾಲಯ ಇದಾಗಿದೆ ಎಂದು ನಂಬಲಾಗಿದೆ. ಈ ದೇವಾಲಯ ತನ್ನದೇ ಆದ ವಿಶಿಷ್ಟ ವಿನ್ಯಾಸಗಳನ್ನು ಹೊಂದಿದೆ. ಕಸ್ತೂರಿ ಈ ದೇವಾಲಯ ಮುಖ್ಯ ದೇವತೆ. ಈ ದೇವತೆ ಇತರೆ ರಂಗನಾಥ, ಪೆರುಮಾಳು ದೇವತೆಗಳಿಂದ ವಿಭಿನ್ನಳು. ಈ ದೇವಾಲಯದ ಜೊತೆಗೆ ಹಲವು ಪುರಾಣಿಕ ಕಥೆಗಳೂ ಅಂಟಿಕೊಂಡಿವೆ.
ಇಲ್ಲಿನ ದ್ವಾರಪಾಲಕರು ಈ ದೇವಾಲಯದ ಅತ್ಯಂತ ವಿಶಿಷ್ಟ ಲಕ್ಷಣಗಳಲ್ಲಿ ಒಂದು ಹಾಗೂ ನೀವು ದೇವಸ್ಥಾನಕ್ಕೆ ತೆರಳುತ್ತಿದ್ದಂತೆ ಇದನ್ನು ಹೌದು ಎಂದು ಒಪ್ಪಿಕೊಳ್ಳುತ್ತೀರಿ. ಒಂದು ನಂಬಿಕೆಯ ಪ್ರಕಾರ, ಈ ದ್ವಾರ ಪಾಲಕರೂ ಒಂದೊಮ್ಮೆ ದೇವರೇ ಆಗಿದ್ದರು ಆದರೆ ತಾವು ಪಡೆದ ಶಾಪದ ಕಾರಣದಿಂದಾಗಿ ಅವರನ್ನು ದ್ವಾರಪಾಲಕರನ್ನಾಗಿಸಿ ದೇವರ ಪೂಜೆಗೆ ನೇಮಿಸಲಾಗುತ್ತದೆ. ಕಮಲವಲ್ಲಿ ತಾಯರ್ ಇಲ್ಲಿ ಪೂಜಿಸಲಾಗುವ ದೇವತೆಯಾಗಿದೆ. ಇಲ್ಲಿಗೆ ಪ್ರತಿ ವರ್ಷ ತಪ್ಪದೇ ಬರುವ ಅನೇಕ ಭಕ್ತರಿದ್ದಾರೆ ಹಾಗೂ ಈ ದೇವಾಲಯದ ವಾರ್ಷಿಕ ಉತ್ಸವವನ್ನು ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.