ಬನ್ನಾರಿ ಈರೋಡ್ ಜಿಲ್ಲೆಯ ಒಂದು ಪ್ರಸಿದ್ಧ ಗ್ರಾಮವಾಗಿದೆ. ಇದು ಸತ್ಯಮಂಗಲಂ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ. ಇದು ನೈಸರ್ಗಿಕ ಸೌಂದರ್ಯ ಹೊಂದಿರುವ ಒಂದು ಸುಂದರವಾದ ಗ್ರಾಮವಾಗಿದೆ. ಇಲ್ಲಿ ಒಂದು ವಿಶೇಷ ಕಾರ್ಯಾಚರಣೆ ಪಡೆ ಇದೆ. ಅವರು ಇದೇ ಗ್ರಾಮದಲ್ಲಿ ತಮ್ಮ ಕೇಂದ್ರ ಕಚೇರಿಯನ್ನೂ ಹೊಂದಿದ್ದಾರೆ. ಈ ಗ್ರಾಮವು ಬನ್ನಾರಿ ಅಮ್ಮನ್ ದೇವಾಲಯಕ್ಕಾಗಿ ಪ್ರಸಿದ್ಧವಾಗಿದೆ. ಈ ರಾಜ್ಯದ ಜನತೆಯ ಹೊರತಾಗಿ ಬೇರೆ ರಾಜ್ಯಗಳಿಂದಲೂ ಜನರು ಇಲ್ಲಿಗೆ ಬಂದು ತಮ್ಮ ಪೂಜೆಗಳನ್ನು ನೆರೆವೇರಿಸುತ್ತಾರೆ. ಕುಂದಮ್ ಈ ದೇವಾಲಯದಲ್ಲಿ ಆಚರಿಸಲಾಗುವ ಒಂದು ಪ್ರಮುಖವಾದ ಉತ್ಸವವಾಗಿದೆ. ತಮಿಳು ತಿಂಗಳು ಪಂಗಿನಿಯಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಅಂದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಇದನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯವು ಬೆಳಗ್ಗೆ 5.30 ರಿಂದ ರಾತ್ರಿ 9 ಘಂಟೆಯ ತನಕ ತೆರೆದಿರುತ್ತದೆ.