ಶ್ರೀ ಕೃಷ್ಣನ ಪರಮಭಕ್ತೆ ಮತ್ತು ಗಾಯಕಿ ಮೀರಾ ಬಾಯಿಯ ಈ ಪುಟ್ಟ ದೇವಾಲಯವು ಜಗತ್ ಮಂದಿರದ ಸಮೀಪದಲ್ಲಿರುವ ವಸತಿ ಪ್ರದೇಶದಲ್ಲಿದೆ. ಶ್ರೀಮಂತ ಮನೆತನಕ್ಕೆ ಸೇರಿದ ಮೀರಾಳನ್ನು ರಾಜಸ್ತಾನದ ರಾಜನೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮೀರಾಗೆ ಈ ದಾಂಪತ್ಯ ಜೀವನದಲ್ಲಿ ಸಂತೋಷವಿರಲಿಲ್ಲ. ಏಕೆಂದರೆ ಆಕೆ ಯಾವಾಗಲೂ ಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿದ್ದಳು. ಮೀರಾಬಾಯಿ ಯಾತ್ರೆಗೆಂದು ಹೋದವಳು ಇಡಿ ಉತ್ತರಭಾರತವನ್ನು ನೋಡಿದ್ದಳು ಎಂದು ಹೇಳುತ್ತಾರೆ. ಕಡೆಯಲ್ಲಿ ದ್ವಾರಕೆಗೆ ಬಂದವಳು ಕೃಷ್ಣ ವಿಗ್ರಹದಲ್ಲಿ ಲೀನಳಾದಳಂತೆ.