ಗಾಲಿಯಾಕೋಟ್ ಹಳ್ಳಿಯು ಮಾಹಿ ನದಿಯ ದಡದಲ್ಲಿದೆ. ಡುಂಗರಪುರದಿಂದ ಸುಮಾರು 58 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ, ಈ ಪ್ರಾಂತವನ್ನು ಆಳುತ್ತಿದ್ದ ಭಿಲ್ಲ ದಳವಾಯಿಯಿಂದಾಗಿ ಈ ಹಳ್ಳಿಗೆ ಹೆಸರು ಬಂದಿದೆ. ಈ ಹಳ್ಳಿಯು ಪಾರ್ಮರ್ಸ್ ಮತ್ತು ಡುಂಗರಪುರ ರಾಜ್ಯದ ರಾಜಧಾನಿಯಾಗಿತ್ತು. ಸೈಯದ್ ಫಕ್ರುದ್ದೀನ್ ಸಮಾಧಿಯಿಂದಾಗಿ ಗಾಲಿಯಾಕೋಟ್ ಜನಪ್ರಿಯವಾಗಿದೆ. ಸೈಯದ್ ಫಕ್ರುದ್ದೀನ್ ಜನಪ್ರಿಯ ಸಂತರಾಗಿದ್ದರು, ಅವರ ಮರಣಾನಂತರ ಗಾಲಿಯಾಕೋಟ್ನಲ್ಲೇ ಸಮಾಧಿ ಮಾಡಲಾಯಿತು. ಈ ಪವಿತ್ರ ಸ್ಥಳವನ್ನು ಬಿಳಿ ಮಾರ್ಬಲ್ ಬಳಸಿ ನಿರ್ಮಿಸಲಾಗಿದೆ ಮತ್ತು ಈ ಸುತ್ತಮುತ್ತಲಿನ ಪ್ರದೇಶದಲ್ಲೇ ಇದು ಅತ್ಯಂತ ಜಾಣ್ಮೆಯ ವಾಸ್ತುಶಿಲ್ಪ ಎಂದು ಕರೆಯಲಾಗಿದೆ. ಈ ದೇವಸ್ಥಾನದ ಗುಮ್ಮಟವನ್ನು ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿದೆ. ಬೃಹತ್ ಪ್ರಮಾಣದ ದಾವೂದಿ ಬೋಹ್ರಾ ಭಕ್ತರು ಇಲ್ಲಿನ ಉರುಸ್ನಲ್ಲಿ ಭಾಗವಹಿಸುತ್ತಾರೆ . ಇದನ್ನು ಮೊಹರಂನ 27ನೇ ದಿನ ಆಚರಿಸಲಾಗುತ್ತದೆ.ಪ್ರವಾಸಿಗರು ವಿಜಯ ಮಠದ ದೇವಸ್ಥಾನ, ವಸುಂಧರಾ ದೇವಿ ದೇವಸ್ಥಾನ ಮತ್ತು ಶಿತ್ಲಾ ಮಠ ದೇವಸ್ಥಾನವನ್ನೂ ಕೂಡಾ ಗಾಲಿಯಾಕೋಟ್ನಲ್ಲಿ ನೋಡಬಹುದು.