ಭದೇರ್ವಾ ಮುಕುಟದ ವಜ್ರ ಎಂದೇ ಪ್ರಸಿದ್ಧಿ ಪಡೆದಿರುವ ಸಿಯೊಜ್ ಹುಲ್ಲುಗಾವಲು ಪ್ರದೇಶ ಕೈಲಾಶ ಕುಂಡದ ದಕ್ಷಿಣ ಭಾಗದಲ್ಲಿದೆ. ಸ್ಥಳೀಯವಾಗಿ, ಸಿಯೊಜ್ ಧರ್ ಎಂದು ಕರೆಯಲ್ಪಡುವ ಈ ಪ್ರದೇಶ ತನ್ನ ಸುತ್ತಲೂ ದಟ್ಟ ಹಿಮಚ್ಛಾದಿತ ಪರ್ವತಗಳಿಂದ ಸುತ್ತುವರೆದಿದೆ. ಸಿಯೋಜ್ ನೀರಿನ ತೊರೆಯೊಂದು ಈ ಕಣಿವೆಯ ಮೂಲಕ ಹರಿದು ಉಧಮ್ಪುರ ಜಿಲ್ಲೆಯ ರಾಮನಗರ ಪ್ರದೇಶ ಸೇರುತ್ತದೆ. ಹಿಂದೂಗಳು ಕೈಗೊಳ್ಳುವ ಪವಿತ್ರ ಕೈಲಾಸಯಾತ್ರೆಗೆ ಆಗಮಿಸುವ ಭಕ್ತರು ಸಿಯೊಜ್ ಹುಲ್ಲುಗಾವಲಿನಲ್ಲಿ ಉಳಿಯುವುದು ವಾಡಿಕೆ.