ಭದೇರ್ವಾದ ಗುಪ್ತ ಗಂಗಾ ದೇವಸ್ಥಾನ ಜಿಲ್ಲೆಯ ಜನಪ್ರಿಯ, ಐತಿಹಾಸಿಕ ಮಹತ್ವವುಳ್ಳ ತಾಣಗಳಲ್ಲೊಂದು. ಹಿಂದೂ ಪವಿತ್ರ ಗ್ರಂಥ ಮಹಾಭಾರತದ ಪ್ರಕಾರ, ಗಡೀಪಾರಾದ ಪಾಂಡು ರಾಜನ ಮಕ್ಕಳು ಕೆಲ ಕಾಲ ಇಲ್ಲಿ ತಂಗಿದ್ದರಂತೆ. ಇಲ್ಲಿನ ಕಲ್ಲುಬಂಡೆಯೊಂದರಲ್ಲಿ ಇಂದಿಗೂ ಪಾಂಡವರಲ್ಲೊಬ್ಬನಾದ ಭೀಮನ ಹೆಜ್ಜೆ ಗುರುತು ಕಾಣಸಿಗುತ್ತದೆ ಎಂಬುದು ಸ್ಥಳೀಯರ ನಂಬಿಕೆ.