ಶ್ರೀಮಂತ ಶಂಕರದೇವ ಕಲಾಕ್ಷೇತ್ರವು ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಕಲಾ ಗ್ಯಾಲರಿ, ಸಂಗ್ರಹಾಲಯ ಮತ್ತು ಒಂದು ವೈಷ್ಣವ ದೇವಾಲಯವನ್ನು ಒಳಗೊಂಡಿದೆ. ಈ ಸಂಸ್ಥೆಯು ಸರ್ಕಾರದಿಂದ 1990 ರಲ್ಲಿ ರಾಜ್ಯದ ಕಲಾ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿತು. ರಾಜ್ಯದ ಈ ಭಾಗದಲ್ಲಿ ವೈಷ್ಣವ ಮತವನ್ನು ರೂಢಿಗೆ ತಂದ ಸಂತರಾದ ಶ್ರೀಮಂತ ಶಂಕರದೇವ ಅವರ ಹೆಸರನ್ನು ಇದಕ್ಕಿಡಲಾಗಿದೆ. ಇದು ಪಂಜಬರಿಯಲ್ಲಿ ಸ್ಥಿತವಿದೆ.
ಈ ಸಂಸ್ಥೆಯಲ್ಲಿ ಸಾಹಿತ್ಯಭವನ ಎಂಬ ಹೆಸರಿನ ಗ್ರಂಥಾಲಯವೂ ಸಹ ಇದೆ. ಇಲ್ಲಿ ಪುರಾತನ ಅಸ್ಸಾಮಿ ಸಾಹಿತ್ಯದ ಹೊತ್ತಿಗೆಗಳು ಹಾಗು ಲೇಖನಿಗಳನ್ನು ಸಂರಕ್ಷಿಸಿಡಲಾಗಿದೆ. ಇನ್ನು ಪ್ರದರ್ಶನಕ್ಕೆಂದೆ ಇಲ್ಲಿ ಲಲಿತ ಕಲಾ ಭವನವೆಂಬ ವಿಶಾಲ ಕೊಠಡಿಯಿದೆ. ಹಲವು ಸಾಂಸ್ಕೃತಿಕ ಕಾರ್ಯಾಗಾರಗಳನ್ನು ಇಲ್ಲಿ ಆಯೋಜಿಸಲಾಗುತ್ತಿರುತ್ತದೆ. ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ವಿಶೇಷವಾಗಿ ನಿರ್ಮಿಸಲಾದ ಅಸ್ಸಾಮಿನ ಹಳ್ಳಿಯ ಒಂದು ಕೃತಕ ಮಾದರಿ ಹಳ್ಳಿ.