ದಿಮಾಪುರವು ಕಚರಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಎಂಬುದನ್ನು ಪ್ರಾಚ್ಯ ವಸ್ತು ಶಾಸ್ತ್ರಙ್ಞರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಈ ತಾಣವು ಶಿಲಾಯುಗದ ಕಾಲದ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಕಚರಿ ಸಾಮ್ರಾಜ್ಯದ ಅವಶೇಷಗಳನ್ನು ಕಚರಿ ಪಳೆಯುಳಿಕೆಗಳು ಎಂದೆ ಕರೆಯುತ್ತಾರೆ. ಇದು ಡಿಮಪುರದ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಈ ಅವಶೇಷಗಳು ಕ್ರಿ.ಶ.13ನೇ ಶತಮಾನದಲ್ಲಿ ನಡೆದ ಅಹೊಮ್ರ ದಾಳಿಯ ಕುರಿತಾಗಿ ಸಹ ಸಾಕ್ಷ್ಯಗಳನ್ನು ಒದಗಿಸುತ್ತದೆ.
ಕಚರಿ ಅವಶೇಷಗಳು ಇತಿಹಾಸಕಾರರ ಪಾಲಿಗೆ ಚಿನ್ನದ ಗಣಿಗಳಿದ್ದಂತೆ. ಇಲ್ಲಿನ ಅವಶೇಷಗಳು ಜನರು ಹಲವಾರು ಶತಮಾನಗಳ ಹಿಂದೆ ಇಲ್ಲಿ ಹೇಗೆ ಜೀವಿಸಿದ್ದರು? ಎಂಬ ಪ್ರಶ್ನೆಗೆ ಸಮರ್ಥ ಉತ್ತರವನ್ನು ನೀಡುತ್ತವೆ. ಇದರ ಜೊತೆಗೆ ಇವುಗಳು ಕಚರಿಯರು ಮೂಲತಃ ಹಿಂದೂಗಳಾಗಿದ್ದರು ಎಂಬುದನ್ನು ಸಾಕ್ಷೀಕರಿಸುತ್ತವೆ. ಇವರು ಆರ್ಯರು ಬರುವ ಮೊದಲೇ ಇಲ್ಲಿ ನೆಲೆಗೊಂಡಿದ್ದ, ಆರ್ಯೇತರ ಜನ ಎಂದು ತಿಳಿದು ಬಂದಿದೆ.
ಇಲ್ಲಿನ ಹಲವಾರು ಅವಶೇಷಗಳು ಏಕಶಿಲಾ ಅವಶೇಷಗಳಾಗಿವೆ. ಇದರ ಜೊತೆಗೆ ಇಲ್ಲಿ ಹಲವಾರು ದೇವಾಲಯಗಳು, ಕೆರೆಗಳು ಮತ್ತು ಒಡ್ಡುಗಳು ನಿರ್ಮಾಣಗೊಂಡಿರುವ ಕುರುಹುಗಳು ಲಭ್ಯವಾಗಿವೆ. ಇಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹಲವಾರು ವಿನ್ಯಾಸದ ಕಲ್ಲಿನ ಇಟ್ಟಿಗೆಗಳನ್ನು ನಾವು ಕಾಣಬಹುದು. ಈ ಸ್ಥಳವನ್ನು ತುಂಬಾ ಅಚ್ಚುಕಟ್ಟಾಗಿ ಸಂರಕ್ಷಿಸಿಕೊಂಡು ಮತ್ತು ಕಾಪಾಡಿಕೊಂಡು ಬರಲಾಗಿದೆ.