ಈ ನಗರ ಪ್ರವಾಸವನ್ನು ಆಸಕ್ತಿದಾಯಕ, ಕುತೂಹಲಕಾರಿ ಮಾಡುತ್ತದೆ ಎಂದು ಹೇಳಬಹುದು. ಧೋಲಾವಿರ ಭುಜ್ ನಿಂದ 250 ಕಿ ಮೀ ಅಂತರದಲ್ಲಿರುವ ಸಣ್ಣ ಸ್ಥಳ. ಸ್ಥಳೀಯವಾಗಿ ಇದನ್ನು ಕೊತಡ ಟಿಂಬ ಎಂದು ಕರೆಯುತ್ತಾರೆ. ಇದು ಪ್ರಾಚೀನ ಹರಪ್ಪನ್ ನಗರದ ಅವಶೇಷಗಳನ್ನು ಹೊಂದಿದೆ ಮತ್ತು ಸಿಂಧೂ ಕಣಿವೆ ನಾಗರೀಕತೆಗೆ ಸೇರಿದ ಭಾರತದ ಪುರಾತತ್ವ ತಾಣವಾಗಿದೆ. ಕುಚ್ ವನ್ಯಜೀವಿ ಅಭಯಾರಣ್ಯದ ಖಾದಿರ್ ಬೆಟ್ ದ್ವೀಪದಲ್ಲಿ ಈ ಸ್ಥಳವಿದೆ. 1967 - 68 ರಲ್ಲಿ ಕಂಡು ಬಂದ ಈ ಸ್ಥಳ ಭಾರತ ಉಪಖಂಡದ ಐದನೇ ಅತಿ ದೊಡ್ಡ ಹರಪ್ಪನ್ ನಗರ ಎನ್ನಲಾಗಿದೆ.ನಿರಂತರವಾಗಿ 1990 ರಿಂದ ಭಾರತದ ಪುರಾತತ್ವ ಶಾಸ್ತ್ರ ಸಮೀಕ್ಷೆ ಮೂಲಕ ಉತ್ಖನನದ ಹಾದಿಯಲ್ಲಿದೆ.
100 ಎಕರೆ ಹರಡಿಕೊಂಡಿರುವ ಈ ಧೋಲಾವಿರ ಆಯತಾಕಾರವನ್ನು ಹೊಂದಿದ್ದು,ಕಾಂಕ್ರೀಟ್ ಜ್ಯಾಮಿತೀಯ ಯೋಜನೆ ಒಳಗೊಂಡಿದೆ.ಇದು ಹೊಂದಿರುವ ಕೋಟೆ,ಮಧ್ಯ ನಗರ ಮತ್ತು ಕೆಳ ನಗರಗಳನ್ನು ಸುಂದರವಾದ ಯೋಜನೆ ಮೂಲಕ ಸಂಪೂರ್ಣವಾಗಿ ಅದ್ಬುತವಾಗಿ ನಿರ್ಮಿಸಲಾಗಿದೆ.ಮತ್ತು ಹರಪ್ಪನ್ ಸಿಟಿಯ ಅಪರೂಪದ ವೈಶಿಷ್ಟ್ಯ ಎಂದರೆ ಮುಂಚಿತವಾಗಿ ನೀರನ್ನು ಸಂರಕ್ಷಿಸಿಡುವ ವಿಧಾನ.ಇದು ಬಹುಷಃ ವಿಶ್ವದ ಅತಿ ಹಳೆಯ ಸಂರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ.