ಸಾರಂಗ, ಧೆಂಕನಲ್ ಪಟ್ಟಣದಿಂದ 81 ಕಿ. ಮೀ ದೂರದಲ್ಲಿದೆ. ಈ ಸ್ಥಳವು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಭಗವಾನ್ ವಿಷ್ಣುವಿನ ಅನಂತಸಾಯಿ ಚಿತ್ರ, ಸಾರಂಗಿಯಲ್ಲಿನ ಬ್ರಾಹ್ಮಣಿ ನದಿ ಅಡಿಯಲ್ಲಿ ಕಲ್ಲಿನ ಹಾಸಿಗೆಯ ಮೇಲೆ ಚಿತ್ರಿಸಲಾಗಿದೆ. ಇದು ಪೌರಾಣಿಕ ಸರ್ಪ ರಾಜ ಅನಂತನ ಹೆಡೆಯ ಸುಂದರವಾದ ಚಿತ್ರಣವನ್ನು ಹೊಂದಿದೆ. ಅನಂತನ ಹೆಡೆ, ಕಿರೀಟದ ರೂಪದಲ್ಲಿ ಭಗವಾನ್ ವಿಷ್ಣುವಿನ ತಲೆಯ ಮೇಲೆ ಬಿಚ್ಚಿರುವುದನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಲಾಗಿದೆ.
ಈ ಚಿತ್ರ ಕಮಲವನ್ನೂ ತೋರಿಸುತ್ತದೆ. ಈ ಕಮಲವು ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನ ನಿವಾಸ ಸ್ಥಾನ. ಈ ಕಮಲವು ಭಗವಾನ್ ಕಮಲವನ್ನು ವಿಷ್ಣುವಿನ ಸ್ಥಳದಿಂದ ಉಗಮವಾಗುವಂತೆ ತೋರಿಸಲಾಗಿದೆ. ಚಿತ್ರದಲ್ಲಿ, ಭಗವಾನ್ ವಿಷ್ಣುವು ಬ್ರಾಹ್ಮಣಿ ನದಿಯ ಕಲ್ಲಿನ ಹಾಸಿಗೆಯ ಮೇಲೆ ಒಂದು ಆಳವಾದ ನಿಷ್ಕ್ರಿಯತೆ/ ನಿದ್ರೆಯನ್ನು ಆನಂದಿಸುತ್ತಿರುವುದನ್ನು ತೋರಿಸಲಾಗಿದೆ . ಭಕ್ತರು ಭಗವಾನ್ ವಿಷ್ಣುವಿನ ಈ ಚಿತ್ರದ ಒಂದು ನೋಟವನ್ನು ಪಡೇಯಲು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.