ಚಿನ್ನದ ಪ್ರಭಾವಳಿ ಜೊತೆ ಚಂದ್ರನಾಥ ಸ್ವಾಮಿಯ ಚಿತ್ರ ಒಳಗೊಂಡ ಚಂದ್ರನಾಥ ಸ್ವಾಮಿ ಬಸದಿಯನ್ನು ಪ್ರವಾಸಿಗರಿಗೆ ಭೇಟಿ ನೀಡಲು 'ಶಿಫಾರಸು' ಮಾಡಲಾಗುತ್ತದೆ. ಈ ಜೈನ ದೇವಾಲಯವು ನೆಲ್ಯಾದಿ ಬೀಡಿನ ಬಿರ್ಮನ್ನ ಪೆರ್ಗದೆ(ಜೈನರ ಮುಖ್ಯಸ್ಥ) ಸಂಸ್ಥಾಪಿಸಿದ ಒಂದು ಅದ್ಭುತ ವಾಸ್ತುಶಿಲ್ಪವಾಗಿದೆ.ಚಂದ್ರನಾಥ ಸ್ವಾಮಿ ಬಸದಿಯು ಶಾಂತಿಯುತ ವಾತಾವರಣದಲ್ಲಿ ಧ್ಯಾನ ಮಾಡಲು ಬಯಸುವ ಜನರಿಗೆ ಸೂಕ್ತ ಸ್ಥಳವೆಂದು ಪರಿಗಣಿಸಲಾಗಿದೆ. ಅನೇಕ ಭಕ್ತರು ಚಂದ್ರನಾಥ ಸ್ವಾಮಿ ದೇವಾಲಯಕ್ಕೆ ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಲು ಪ್ರತಿದಿನ ಭೇಟಿ ನೀಡುತ್ತಾರೆ. ಈ ಸ್ಥಳವನ್ನು ತಲುಪಿದ ಮೇಲೆ, ಪ್ರವಾಸಿಗರಿಗೆ ಸುಂದರ ಕೆತ್ತನೆಗಳು ಮತ್ತು ಕಲ್ಲಿನ ಶಿಲ್ಪಗಳನ್ನು ವೀಕ್ಷಿಸುವ ಅವಕಾಶ ಸಿಗುತ್ತದೆ.ದೇವಾಲಯವನ್ನು ದಿಗಂಬರರ ಪವಿತ್ರ ದೇವಾಲಯಗಳಲ್ಲೊಂದಾಗಿ ಪರಿಗಣಿಸಲಾಗಿದೆ. ಅದರ ರಚನೆ ನಾಲ್ಕು ದೇವತೆಗಳಿಗೆ ಮೀಸಲಾದ ಹೆಂಚುಗಳ ಛಾವಣಿಯನ್ನು ಹೊಂದಿದೆ. ಚಂದ್ರನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲು ಬಯಸುವ ಭಕ್ತರಿಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಘಂಟೆ ಮತ್ತು ಸಂಜೆ 6.30 ರಿಂದ 8.30ರ ವರೆಗೆ ಸೂಕ್ತ ಸಮಯವಾಗಿರುತ್ತದೆ.