ಹನುಮಾನ್ ತೀರ್ಥ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಕ್ಷೇತ್ರ. ಈ ಪ್ರದೇಶಕ್ಕೆ ರಾಮಾಯಣದೊಂದಿಗೆ ಬಹಳ ಹತ್ತಿರದ ಸಂಬಂಧವಿದೆ. ಈ ಸ್ಥಳವು ಉತ್ಹಂಗರೈನಿಂದ 10 ಕಿ.ಮೀ ದೂರದಲ್ಲಿದ್ದು ತೀರ್ಥಗಿರೀಶ್ವರ ದೇವಸ್ಥಾನದೊಂದಿಗೆ ಹತ್ತಿರದ ಸಂಬಂಧವುಳ್ಳದ್ದಾಗಿದೆ. ತೀರ್ಥಮಲೈ ಮತ್ತು ಹನುಮಾನ್ ತೀರ್ಥ ಹತ್ತಿರದಲ್ಲಿರುವುದರಿಂದ ತೀರ್ಥಮಲೈಯನ್ನು ಸಂದರ್ಶಿಸಿದವರು ಈ ಸ್ಥಳವನ್ನು ಸಂದರ್ಶಿಸುತ್ತಾರೆ.
ಈ ಕ್ಷೇತ್ರ ತುಂಬಾ ಪ್ರಸಿದ್ಧವಾಗಿದ್ದು, ಸಾವಿರಾರು ಮಂದಿ ತಮ್ಮ ಬಂಧು ಮಿತ್ರರೊಡನೆ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಕ್ಷೇತ್ರವು ದಕ್ಷಿಣ ಪೆನ್ನಾರ್ ನದಿಯ ತೀರದಲ್ಲಿದೆ. ಹಿಂದೂ ಪುರಾಣದ ಪ್ರಕಾರ, ಹನುಮಾನ್ ದೇವರು ಒಂದು ಪಾತ್ರೆ ಗಂಗಾ ಜಲವನ್ನು ಇಲ್ಲಿ ಚೆಲ್ಲಿದ್ದರು ಎನ್ನಲಾಗುತ್ತದೆ. ಇಲ್ಲಿ ಒಂದು ಚಿಲುಮೆಯಿದ್ದು, ಬಂಡೆಯಿಂದ ನೀರು ಒಸರುತ್ತದೆ. ಇಲ್ಲಿನ ನದಿಯ ನೀರು ಬರಿದಾದರೂ, ಇಲ್ಲಿನ ಚಿಲುಮೆಯಲ್ಲಿ ಮಾತ್ರ ಯಾವತ್ತೂ ನೀರು ಇರುತ್ತದೆ ಮತ್ತು ಈ ನೀರು ಬಹಳ ಸಿಹಿಯಾಗಿರುತ್ತದೆ.