ಧರ್ಮಪುರಿ ಜಿಲ್ಲೆಯಲ್ಲಿರುವ ಚೆನ್ನರಾಯ ಪೆರುಮಾಳ್ ದೇವಸ್ಥಾನವು ತಮಿಳುನಾಡಿನ ಅತ್ಯಂತ ಪುಣ್ಯಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ. ಈ ದೇಗುಲವು ಅಂಡಾಕಾರವಾಗಿದ್ದು, ತಗೊದುರ್ ನ ಪ್ರಾಚೀನ ಅಧಿಪತಿಗಳಾಗಿದ್ದ ಅಧಿಯಮನ್ ಅವರ ರಾಜಧಾನಿಯಲ್ಲಿತ್ತು ಎಂದು ಸ್ಥಳೀಯರು ನಂಬುತ್ತಾರೆ.
ಈ ದೇವಸ್ಥಾನವನ್ನು ಕೃಷ್ಣ ದೇವ ರಾಯ ಹಾಗೂ ರಾಯ್ಸಲ ರಾಜರು ಕಟ್ಟಿಸಿದ್ದರು ಎನ್ನಲಾಗಿದೆ. ಒಳ ಗೋಪುರದ ಸುತ್ತಲೂ ಮಂಟಪವನ್ನು ಕೆತ್ತಲಾಗಿದೆ. ದೇವಳದ ಗರ್ಭಗುಡಿಯ ತುಂಬಾ ಹದಿಮೂರನೇ ಶತಮಾನದ ಚಿತ್ರಕಲೆಗಳಿವೆ. ವಸಂತ ಕಾಲದಲ್ಲಿ ಈ ದೇಗುಲವನ್ನು ಸಂದರ್ಶಿಸುವುದು ತುಂಬಾ ಶ್ರೇಯಸ್ಕರ ಎಂಬುದು ಸ್ಥಳೀಯರ ಅಂಬೋಣ. ಅದಲ್ಲದೆ ಈ ಸ್ಥಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಧಾರಾಳ ಬಸ್ ವ್ಯವಸ್ಥೆ ಇದೆ.