ಬ್ರಹ್ಮಪುರವು ಗೌತಮ ಕೊಳ ಮತ್ತು ಗೌತಮ ಋಷಿಯ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಐತಿಹ್ಯಗಳ ಪ್ರಕಾರ ಬ್ರಹ್ಮನು ಗೌತಮ ಋಷಿಯ ಮುಂದೆ ಪ್ರತ್ಯಕ್ಷನಾದದ್ದು ಇದೇ ಸ್ಥಳದಲ್ಲಿ. ಈ ಕಾರಣದಿಂದಲೇ ಈ ಹಳ್ಳಿಗೆ ಈ ಹೆಸರು. ಬ್ರಹ್ಮನು ಸ್ವತಃ ಗೌತಮನು ಗಂಗೆಗೆ ಸ್ನಾನಕ್ಕೆ ಹೋಗುವ ಕಷ್ಟವನ್ನು ತಪ್ಪಿಸುವ ಸಲುವಾಗಿ 7 ಬಾಣಗಳನ್ನು ಉಪಯೋಗಿಸಿ ಇಲ್ಲಿ ಬ್ರಹ್ಮಕುಂಡವನ್ನು ರಚಿಸಿದನು ಎಂದು ನಂಬಲಾಗುತ್ತದೆ.