ರಾಸಲೀಲೆ ಎನ್ನುವುದು ಕೃಷ್ಣ-ರಾಧೆ ಮತ್ತು ಅವಳ ಸಖಿಯರ ಪ್ರಸಿದ್ಧ ನೃತ್ಯ. ಕೃಷ್ಣನ ಅನುಯಾಯಿಗಳಾದ ಮಣಿಪುರಿಗಳು ಪ್ರತಿವರ್ಷ ಕೃಷ್ಣನಿಗೆ ಗೌರವ ಸೂಚಿಸಲು ರಾಸ ಲೀಲಾ ನೃತ್ಯವನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಧಲೈಜಿಲ್ಲೆಯಲ್ಲಿ ಮಣಿಪುರಿ ಸಮುದಾಯದವರು ರಾಸ ಮೇಳವನ್ನು ಆಯೋಜಿಸುತ್ತಾರೆ.
ಇದರ ಅತಿ ದೊಡ್ಡ ಮೇಳ ಸಲೆಮಾದಲ್ಲಿ ನಡೆಯುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಇದು ನಡೆಯುವುದನ್ನು ನೋಡಬಹುದು. ಇದು ಡಿಸಂಬರ್ ತಿಂಗಳಲ್ಲಿ ನಡೆಯುತ್ತದೆ. ಈ ಮೇಳದ ಪ್ರಮುಖ ಆಕರ್ಷಣೆ ರಾಸ ಯಾತ್ರೆ ಅಂದರೆ ಕೃಷ್ಣನ ಉತ್ಸವ. ಈ ಉತ್ಸವದಲ್ಲಿ ಕೃಷ್ಣ ಮಣ್ಣಿನ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ವಿಗ್ರಹಗಳು ಕೃಷ್ಣನ ಜೀವನದ ವಿವಿಧ ಘಟನೆಗಳನ್ನು ಹೇಳುವಂತಹವು.
ಬಹುಪಾಲು ಕೃಷ್ಣನ ಅನುಯಾಯಿಗಳು ಧಲೈನಲ್ಲಿ ನಡೆಯುವ ರಾಸ ಮೇಳದಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಇದು ಈ ಜಿಲ್ಲೆಯ ಪ್ರಮುಖ ಪ್ರವಾಸ ಆಕರ್ಷಣೆಗಳಲ್ಲಿ ಒಂದು. ಅಂಬಸ್ಸಾ ಅಗರತಲದಿಂದ 90 ಕಿಮೀ ದೂರದಲ್ಲಿದೆ.