ದೇವಪ್ರಯಾಗದ ಮ್ರಮುಖ ಆಕರ್ಷಣೆಗಳ ಪೈಕಿ ಒಂದಾದ ರಘುನಾಥ ದೇವಸ್ಥಾನ ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರ. ಶ್ರೀ ರಾಮಚಂದ್ರನನ್ನು ಇಲ್ಲಿ ಆರಾಧಿಸಲಾಗುತ್ತದೆ. ಶ್ರೀರಾಮ, ಸೀತಾ ಹಾಗೂ ಲಕ್ಷ್ಮಣರ ವಿಗ್ರಹವನ್ನು ಮುಖ್ಯವಾಗಿ ಇಲ್ಲಿ ಪೂಜಿಸಲಾಗುತ್ತದೆ. ಕುಲ್ಲುವನ್ನು ಆಳುತ್ತಿದ್ದ ರಾಜಾ ಜಗತ್ಸಿಂಗ್ ಈ ದೇವಾಲಯವನ್ನು ಸಾವಿರ ವರ್ಷಗಳ ಹಿಂದೆ ಕಟ್ಟಿದನೆಂಬ ನಂಬಿಕೆ ಇದೆ.
ಇವತ್ತು ನಾವು ಕಾಣುತ್ತಿರುವ ಈ ದೇವಾಲಯದ ವಿನ್ಯಾಸ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಭ್ಸಿಂಗ್ 1835 ರಲ್ಲಿ ಮರು ನಿರ್ಮಾಣ ಮಾಡಿದ್ದಾಗಿದೆ. 1835 ರಲ್ಲಿ ಶುರುವಾದ ನವೀಕರಣ ಕಾಮಗಾರಿ 1860 ರಲ್ಲಿ ಪೂರ್ಣಗೊಂಡ ಬಗ್ಗೆ ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಈ ಅವಧಿಯಲ್ಲಿ ರಾಜಾಗುಲಾಭ್ಸಿಂಗ್ ನ ಮಗ ರಣಭೀರ್ ಸಿಂಗ್ ಆಳ್ವಿಕೆ ನಡೆಸುತ್ತಿದ್ದ.
ದೇವಾಲಯದ ಮೂರೂ ಬದಿಯ ಒಳಗೋಡೆಗಳಿಗೆ ಚಿನ್ನದ ಹಾಳೆಯ ಹೊದಿಗೆ ಹೊದಿಸಲಾಗಿದ್ದು, ಹಿಂದೂ ದೇವತೆಗಳ ಚಿತ್ರವನ್ನು ಮೂಡಿಸಲಾಗಿದೆ. ರಾಮ, ಕೃಷ್ಣ, ತೆಲುಗು ಮಾತನಾಡುವ ಅರ್ಚಕರು ಇಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಾರೆ.