ಇದು ದೇವಪ್ರಯಾಗದ ಮತ್ತೊಂದು ಪುಣ್ಯಸ್ಥಳ. ಶಾಂತಾ ನದಿಯ ದಡದಲ್ಲಿ ಈ ದೇವಸ್ಥಾನವಿದೆ. ದಶರಥನ ಮಗಳ ಹೆಸರಿನಿಂದ ಇದನ್ನು ಕರೆಯಲಾಗಿದೆ. ಹಿಂದೂಗಳಲ್ಲಿರುವ ನಂಬಿಕೆಯ ಪ್ರಕಾರ, ಶ್ರೀರಾಮಚಂದ್ರನ ಅಪ್ಪ ದಶರಥ ಮಹಾರಾಜ ಈ ಸ್ಥಳದಲ್ಲಿ ತಪಸ್ಸು ಕೈಗೊಂಡಿದ್ದ. ದೇವಾಲಯದ ಬಳಿ ಇರುವ ಪುಟ್ಟ ಬಂಡೆಯೊಂದನ್ನು ಜನರು ರಾಜನ ಸಿಂಹಾಸನವೆಂದು ನಂಬಿದ್ದಾರೆ.