ಪ್ರವಾಸಿಗರು ದೇವರಾಯನದುರ್ಗಕ್ಕೆ ಹೋದಾಗ ತಪ್ಪದೆ ಇಲ್ಲಿನ ಯೋಗ ನರಸಿಂಹ ದೇವಾಲಯಕ್ಕೆ ಭೇಟಿಕೊಡಬೇಕು. ಇದು ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ಪ್ರಸಿದ್ಧ ಜನಪದಕಥೆಯ ಪ್ರಕಾರ ಬ್ರಹ್ಮದೇವನು ಈ ಯಾತ್ರಾ ಸ್ಥಳವನ್ನು ನಿರ್ಮಾಣ ಮಾಡಿದನಂತೆ. ಈ ಸ್ತಳದಲ್ಲಿ ಬ್ರಹ್ಮನು 1000 ವರ್ಷಗಳ ಕಾಲ ಶಿವನ ಕುರಿತು ತಪಸ್ಸು ಮಾಡಿದನಂತೆ, ಆಗ ಶಿವನು ಶ್ರೀ ಮಹಾವಿಷ್ಣುವಿನ ಅವತಾರವಾದ ಯೋಗ ನರಸಿಂಹ ಸ್ವಾಮಿಯ ರೂಪದಲ್ಲಿ ಕಾಣಿಸಿಕೊಂಡನೆಂದು ಹೇಳಲಾಗುತ್ತಿದೆ.
ಇಲ್ಲಿಗೆ ಹೋಗುವ ಹಾದಿಯಲ್ಲಿ ಒಂದು ಪವಿತ್ರ ಕಲ್ಯಾಣಿ ತೀರ್ಥವನ್ನು ಕಾಣಬಹುದು. ಇದು ಯೋಗ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿದೆ. ಸ್ತಳೀಯ ನಂಬಿಕೆಗಳ ಪ್ರಕಾರ ಈ ಪವಿತ್ರ ಝರಿಯು ಇಲ್ಲಿನ ಮೂಲದೇವರ ವಿಗ್ರಹದಿಂದ ಹರಿದು ಬರುತ್ತದೆಯಂತೆ. ಪ್ರವಾಸಿಗರು ಇಲ್ಲಿನ ವೀಕ್ಷಣ ಸ್ಥಳದಲ್ಲಿ ನಿಂತು ಶ್ರೀ ವಿದ್ಯಾಶಂಕರ ದೇವಾಲಯವನ್ನು ನೋಡಬಹುದು.ಇದು 700 ವರ್ಷಗಳಷ್ಟು ಹಿಂದೆ ನಿರ್ಮಾಣವಾಗಿದ್ದು, ದುರ್ಗದಹಳ್ಳಿ ಗ್ರಾಮದಲ್ಲಿದೆ.