ಕೊಲ್ಕತ್ತಾದಲ್ಲಿ ಸ್ವಾಮಿ ವಿವೇಕಾನಂದರಿಂದ ಸ್ಥಾಪಿತವಾದ ರಾಮಕೃಷ್ಣ ಮಿಷನ್ನ ವಿಭಾಗವಾಗಿ 1922ರಲ್ಲಿ ವಿದ್ಯಾಪೀಠದಲ್ಲಿ ಈ ಮಿಷನ್ ಸ್ಥಾಪನೆಯಾಯಿತು. ಸ್ವಾಮಿ ವಿವೇಕಾನಂದರ ಉಪದೇಶಗಳು ಮತ್ತು ಆದರ್ಶಗಳಿಗನುಗುಣವಾಗಿ ಹುಡುಗರಿಗೆ ಮಾತ್ರ ಶಿಕ್ಷಣ ನೀಡುತ್ತಿರುವ ಶಿಕ್ಷಣಸಂಸ್ಥೆಯಿದು. ಇದೊಂದು ವಸತಿ ಶಾಲೆ. ರಾಮಕೃಷ್ಣ ಮಿಷನ್ನ ಅತ್ಯಂತ ಪುರಾತನ ಸಂಸ್ಥೆಗಳಲ್ಲಿ ಒಂದು. ಇದರ ಕ್ಯಾಂಪಸ್ನ ಸುತ್ತ ಹಸಿರು ಮರಗಳು ಮತ್ತು ಆಟದ ಮೈದಾನಗಳಿವೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಎಲ್ಲ ಸೌಲಭ್ಯಗಳು ಇಲ್ಲಿವೆ. ಈ ಶಾಲೆಯನ್ನು ಸಂನ್ಯಾಸಿಗಳು ನಡೆಸುತ್ತಿದ್ದಾರೆ. ಇಲ್ಲಿಗೆ ಜಗತ್ತಿನ ಎಲ್ಲ ಭಾಗಗಳ ಜನರೂ ಬರುತ್ತಾರೆ.
ಈ ಮಿಷನ್ ಧಾರ್ಮಿಕ ಪುಸ್ತಕಗಳ ಪ್ರಕಟಣೆ ಮತ್ತು ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಹರಡುತ್ತಿದೆ. ಕ್ಯಾಂಪಸ್ಸಿನ ಹೃದಯಭಾಗದಲ್ಲಿ ದೇವಾಲಯವಿದ್ದು ಇಲ್ಲಿ ದಿನನಿತ್ಯ ಪ್ರಾರ್ಥನೆ ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ರಾಮಕೃಷ್ಣ ದರ್ಶನ ಎಂಬ ಪ್ರದರ್ಶನವನ್ನು ವರ್ಷಪೂರ್ತಿ ನಡೆಸಲಾಗುತ್ತದೆ. ಶಾರದಾ ದರ್ಶನ ಎನ್ನುವ ಸಂಗ್ರಹಾಲಯ ಕೂಡ ಇದೆ.