ಈ ಕೋಟೆ 1057 ರಲ್ಲಿ ಚಂಡೇಲಾವನ್ನು ಆಳ್ವಿಕೆ ಮಾಡುತ್ತಿದ್ದ ಕೀರ್ತಿವರ್ಮನ್ ಅವರದ್ದು. ಆದರೂ ಹಲವರು ಇದು ಇದಕ್ಕೂ ಪುರಾತನದ ಕಾಲದ್ದು ಎಂದು ನಂಬುತ್ತಾರೆ. ಅವರ ಪ್ರಕಾರ ಇದು ಒಂಬತ್ತನೇ ಶತಮಾನದಲ್ಲಿ ಪ್ರಾತಿಹಾರವನ್ನು ಆಳುತ್ತಿದ್ದ ಕನ್ನೌಜ್ ಅವಧಿಯಲ್ಲಿ ನಿರ್ಮಿತವಾಗಿದ್ದು ತದನಂತರ ಚಂಡೇಲಾ ಅಧೀನಕ್ಕೆ ಬಂತೆಂದು ಅವರ ನಂಬಿಕೆ. ಅಂತಿಮವಾಗಿ ಇದನ್ನು ಗ್ವಾಲಿಯರ್ ನ ಸಿಂಧ್ಯಾ ಕುಟುಂಬ ತನ್ನ ಅಧೀನಕ್ಕೆ ತಂದುಕೊಂಡಿತು. ಈ ಕೋಟೆಗೆ ಹೊರಾಂಗಣ ಗೋಡೆಗಳೂ ಇದ್ದು, ತುದಿಯಲ್ಲಿ ಬೇತ್ವಾ ನದಿ ಕಡೆಗೆ ಇಳಿಜಾರಿನಿಂದ ಕೂಡಿದೆ. ಕೋಟೆಗೆ ಎರಡು ಬಾಗಿಲುಗಳಿದ್ದು ಆನೆ ಬಾಗಿಲು ಮತ್ತು ದೆಲ್ಲಿ ಬಾಗಿಲು ಎಂದು ಹೆಸರಿಡಲಾಗಿದೆ. ಈ ಕೋಟೆಯ ಸುತ್ತಮುತ್ತ ಕೆಲವು ಪುರಾತನ ಜೈನರ ದೇವಾಲಯಗಳಿದ್ದು ಭಾರತದ ಇತಿಹಾಸದ ಮಧ್ಯ ಭಾಗದ ಅವಧಿಯದ್ದು.
ಅಲ್ಲದೆ ಮೂರು ಪ್ರಮುಖ ಘಾಟುಗಳಿಲ್ಲಿದ್ದು, ಅವುಗಳೆಂದರೆ ನಹಾರ್ ಘಾಟ್, ರಾಜ್ಘಾಟ್ ಮತ್ತು ಘಾಟ್. ಜೊತೆಗೆ ’ಸಿದ್ದಿಕಿ ಗುಫಾ’ ಎಂಬ ಹೆಸರಿನ ಗುಹೆಗಳಿದ್ದು ಬೇತ್ವಾ ನದಿಗೆ ಸಂಪರ್ಕವಿದೆ.