ದೆಹಲಿಯ ಉತ್ತರ ಭಾಗದಲ್ಲಿ ಕೃಷ್ಣನಿಗಾಗಿ ನಿರ್ಮಿಸಿರುವ ದೇವಾಲಯವಿದೆ, ಅದನ್ನು ಶ್ರೀ ಉತ್ತರ ಗುರುವಾಯೂರಪ್ಪನ ದೇವಾಲಯ ಎಂದು ಕರೆಯುತ್ತಾರೆ. 1983 ರಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಮಯೂರ ವಿಹಾರದಲ್ಲಿದ್ದು, ದೆಹಲಿ ವಾಸಿಗಳು ಹಾಗೂ ಸುತ್ತಲಿನ ಜನರು ಯಾವಾಗಲೂ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಕೇರಳಾ ರಾಜ್ಯದಲ್ಲಿರುವ ಶ್ರೀ ಕೃಷ್ಣ ದೇವಾಲಯದ ಮಾದರಿಯಲ್ಲೇ ಈ ದೇವಾಲಯವನ್ನೂ ನಿರ್ಮಿಸಲಾಗಿದೆ. ಚಾಂದ್ರ ಮಾಸದಲ್ಲಿ ಬರುವ ವಿಶೇಷ ದಿನಗಳು, ಹಬ್ಬ-ಹರಿದಿನ ಹಾಗೂ ಇತರೆ ವಿಶೇಷ ವಾರ್ಷಿಕ ಸಮಾರಂಭಗಳಲ್ಲಿ ನಡೆಯುವ ಪೂಜೆ ವಿಧಿವಿಧಾನಗಳು ಅತ್ಯಂತ ಜನಪ್ರಿಯವಾದವುಗಳು.
ಇಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳಲ್ಲದೆ, ಸಾರ್ವಜನಿಕರ ಅಭಿವೃದ್ಧಿಗಾಗಿ ಸಾಮಾಜಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ಈ ದೇವಾಲಯವು ಚಾರಿಟಬಲ್ ಆಸ್ಪತ್ರೆಯನ್ನೂ, ಹರ್ಷ ಧರ್ಮ ಪರಿಷತ್ (ಶಿಕ್ಷಣ ಮತ್ತು ಉದ್ಯೋಗ ಸಹಾಯಕ ಮಂಡಳಿ) ಹಾಗೂ ಸಭಾಂಗಣ ಹೊಂದಿದೆ. ಸಭಾಂಗಣ ಹಾಗೂ ಪೂಜೆಗಾಗಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಕೂಡ ಇದೆ.