ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ರ ನೆನಪಿಗಾಗಿ ದೆಹಲಿ ಪ್ರವಾಸೋದ್ಯಮ ಇಲಾಖೆಯು ಆಜಾದ್ ಹಿಂದ್ ಗ್ರಾಮ ಟೂರಿಸ್ಟ್ ಸಂಕೀರ್ಣವನ್ನು ನಿರ್ಮಿಸಿದೆ. ಇದೇ ಪ್ರದೇಶದಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ್ರವರು ದೇಶವನ್ನು ತೊರೆಯುವ ಮುನ್ನ ಯೋಧರನ್ನು ಉದ್ದೇಶಿಸಿ ಮಾತನಾಡಿದ್ದರು.ಸ್ಮಾರಕವು ದೆಹಲಿ-ಹರಿಯಾಣ ರಾಷ್ಟ್ರೀಯ ಹೆದ್ದಾರಿ 10 ರ ಮೇಲೆ ದೆಹಲಿಯಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಉತ್ತರ ಭಾರತೀಯ ಶೈಲಿಯಲ್ಲಿ ಈ ಸ್ಮಾರಕದ ವಿನ್ಯಾಸವಿದೆ.
ವಿವಿಧ ಆಕೃತಿಗಳ ಮೂಲಕ ಕೋಲ್ಕತ್ತಾದ ಕಲಾಕಾರರು ನೇತಾಜಿಯವರ ಮನೋಸ್ಥಿತಿಯನ್ನು ಇಲ್ಲಿ ಚಿತ್ರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕೆಲವು ಪ್ರಮುಖ ಮಜಲುಗಳನ್ನೂ ಈ ಮ್ಯೂಸಿಯಂ ಹೊಂದಿದೆ.
ಇಡೀ ಕಟ್ಟಡ ಸಂಕೀರ್ಣದಲ್ಲಿ ಪ್ರಮುಖ ಆಕರ್ಷಣೆಯೆಂದರೆ ಅತಿದೊಡ್ಡ ಮೊಸಾಯಿಕ್ ಗೋಪುರ ಮತ್ತು ಮ್ಯೂಸಿಯಂ. ಮ್ಯೂಸಿಯಂ (ದಿಲ್ಲಿ ಚಲೋ)ನಲ್ಲಿ ಸ್ವಾತಂತ್ರ್ಯ ಹೋರಾಟದ ವರದಿಗಳನ್ನು ಹೊತ್ತಿರುವ ಅಪಾರ ಪ್ರಮಾಣದ ದಿನಪತ್ರಿಕೆಗಳ ತುಣುಕುಗಳನ್ನು ಕಾಣಬಹುದು ಮತ್ತು ಭಾರತೀಯ ಸೇನೆಯ ಶ್ರೇಣಿಯನ್ನೂ ಕೂಡಾ ಇಲ್ಲಿ ವಿವರಿಸಲಾಗಿದೆ.
ಈ ಸಂಕೀರ್ಣದಲ್ಲಿರುವ ಇತರೆ ಆಕರ್ಷಣೆಗಳೆಂದರೆ ಆಂಪಿಥಿಯೇಟರ್, ಫುಡ್ ಪಾರ್ಕ್, ಸಾರ್ವಜನಿಕ ಟೆಲಿಫೋನ್ ಬೂತ್, ಸ್ಮಾರಕ ಮತ್ತು ಉದ್ಯಾನ ಹಾಗೂ ಮಾಹಿತಿ ಕೇಂದ್ರ. ರಾಷ್ಟ್ರೀಯ ರಜಾ ದಿನಗಳ ಹೊರತಾಗಿ ಇತರ ಎಲ್ಲಾ ದಿನಗಳಲ್ಲೂ ಈ ಸಂಕೀರ್ಣ ತೆರೆದಿರುತ್ತದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ತೆರೆದಿರುತ್ತದೆ.