ದಾರಾಸುರಂನ ಹೊರಗಣ ಭಾಗದಲ್ಲಿ ತಿರುನಲ್ಲೂರು ಎಂಬ ಹಳ್ಳಿಯಿದೆ. ಇದು ತಂಜಾವೂರು ಜಿಲ್ಲೆಯ ಒರತನಾಡು ತಾಲ್ಲೂಕಿನ ದಾರಾಸುರಂನಿಂದ 8 ಕಿ,ಮೀದೂರದಲ್ಲಿದೆ. ಇಲ್ಲಿ ಪ್ರಸಿದ್ಧ ಕಲ್ಯಾಣಸುಂದರೇಶ್ವರ ದೇವಾಲಯ. ಶಿವನು ಇಲ್ಲಿ ಕಲ್ಯಾಣಸುಂದರೇಶ್ವರ ಎಂದು ಪೂಜೆಗೊಳ್ಳುತ್ತಾನೆ. ವರ್ಷಪೂರ್ತಿ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಾಣಗೊಂಡದ್ದು. ದಾರಾಸುರಂನಿಂದ ಇಲ್ಲಿಗೆ ಬಸ್ಸಿನಲ್ಲಿ ಸುಲಭವಾಗಿ ತಲುಪಬಹುದು. ಇಲ್ಲಿಗೆ ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಸುಂದರಪೆರುಮಾಳ್ ಕೋವಿಲ್ ರೈಲು ನಿಲ್ದಾಣ.