ಕುಂಭಾರಿಯ ಜೈನ ಮಂದಿರಗಳನ್ನು 12ನೆಯ ಶತಮಾನದಲ್ಲಿ ವಿಮಲ್ ಷಾನು ಕಟ್ಟಿಸಿದನು. ಈ 5 ಮಂದಿರಗಳನ್ನು 5 ಮಂದಿ ಜೈನ ತೀರ್ಥಂಕರರಾದ ಮಹಾವೀರ, ನೇಮಿನಾಥ, ಸಂಭವನಾಥ, ಶಾಂತಿನಾಥ ಮತ್ತು ಪಾರ್ಶ್ವನಾಥರಿಗೆ ಸಮರ್ಪಿಸಲಾಗಿದೆ. ಕಲಾತ್ಮಕವಾಗಿ ಬಿಳಿ ಅಮೃತಶಿಲೆಯಲ್ಲಿ ಈ ಮಂದಿರಗಳನ್ನು ಕಟ್ಟಲಾಗಿದೆ. ವಿಮಲ್ ಷಾನು ಕಟ್ಟಿಸಿದ 360 ಜೈನ ಮಂದಿರಗಳಲ್ಲಿ ಉಳಿದಿರುವುದು ಇವು ಮಾತ್ರ. ವಿಮಲ್ ಷಾನು ಚಾಲುಕ್ಯ ದೊರೆ ಭೀಮದೇವ- Iನ ಮಂತ್ರಿಯಾಗಿದ್ದನು. ಈ ಮಂದಿರಗಳು ತರಂಗ ಬೆಟ್ಟಗಳಿಂದ 40 ಕಿಮೀ ದೂರದಲ್ಲಿದೆ. ಇಲ್ಲಿ ದೇವ ದೇವತೆಗಳ, ದೇವಕನ್ನಿಕೆಯರ, ಕುದುರೆಸವಾರರ ಮತ್ತು ಸಂಗೀತಗಾರರ ಸುಂದರ ಕಲಾತ್ಮಕ ಕೆತ್ತನೆಗಳನ್ನು ಕಾಣಬಹುದು. ಈ ಮಂದಿರಗಳು ಬೆಳಗ್ಗೆ 6.30 ರಿಂದ ರಾತ್ರಿ 7.30ರವರೆಗೆ ತೆರೆದಿರುತ್ತದೆ.