ಮಧ್ಯಕಾಲೀನ ಶಿಖರ ಮಾದರಿಯ ವಾಸ್ತುಶಿಲ್ಪ ಹೊಂದಿ ನಿರ್ಮಾಣಗೊಂಡ ದೇವಾಲಯ ಬನ್ಸಿ ಗೋಪಾಲ ದೇವಾಲಯ. ಇದು ಶ್ರೀಕೃಷ್ಣ ಹಾಗೂ ರಾಧೆಗೆ ಮೀಸಲಾದ ದೇಗುಲ. ಈ ದೇವಾಲಯದ ಹೆಸರು ಇತಿಹಾಸ ಪುಟದಲ್ಲಿ ಅಚ್ಚೊತ್ತಿದೆ. 1595 ರಲ್ಲಿ ರಾಜಾ ಬಲಭದ್ರ ಈ ದೇವಾಲಯದ ಬಗ್ಗೆ ತಾಮ್ರದ ಕೆತ್ತನೆಯಲ್ಲಿ ವಿಷಯ ಉಲ್ಲೇಖಿಸಿದ್ದ ಎಂದು ದಾಖಲೆ ಹೇಳುತ್ತದೆ.
ದೇಗುಲದ ಪ್ರವೇಶ ಹಿಂದು ಪುರಾಣಗಳಲ್ಲಿ ಉಲ್ಲೇಖವಾದ ಕೆಲ ಶಿಲ್ಪಗಳಿಂದ ಅಲಂಕೃತವಾಗಿದೆ. ದೇವಾಲಯ ಆವರಣದಲ್ಲಿ ಕಜುರಾಹೋ ಕಲೆಯ ಆಕರ್ಷಕ ನೋಟವನ್ನು ಸವಿಯಬಹುದು. ಇದಲ್ಲದೇ ಆವರಣದಲ್ಲಿ ಹಿಂದು ದೇವರಾದ ಹರಿ-ಹರ, ಸೂರ್ಯ, ವಿಷ್ಣು, ಉಮಾಮಹೇಶ್ವರರ ವಿಗ್ರಹ ಇದೆ.