ಕಟಕ್ ನಿಂದ ಸುಮಾರು 37 ಕಿ.ಮೀ. ದೂರದಲ್ಲಿ ಮಹಾನದಿಯ ತಟದಲ್ಲಿ ಈ ಧಾಬಳೇಶ್ವರ ಮಂದಿರವಿದೆ. ಮಂದಿರವನ್ನು 16ನೇ ಶತಮಾನದಲ್ಲಿ ಕಟ್ಟಿಸಲಾಯಿತು. ಮಂದಿರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಮಂದಿರದ ಸುತ್ತವಿರುವ ನೈಸರ್ಗಿಕ ಸೌಂದರ್ಯ ಮತ್ತು ಕಟ್ಟಡದ ಸೌಂದರ್ಯ ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಸುಂದರವಾದ ಕಲ್ಲಿನ ಕೆತ್ತನೆ ಮತ್ತೊಂದು ಆಕರ್ಷಣೆ.
ಮಂದಿರದ ಒಳಗೆ ಹಾಗು ಹೊರಗೆ ಸ್ತಬ್ಧವಾದ ಹಾಗು ಪ್ರಶಾಂತವಾದ ವಾತಾವರಣವಿದೆ. ಇದರ ವೈಭವವನ್ನು ನೋಡಲು ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಬರುತ್ತಾರೆ. ಮಹಾದೇವನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ವರ್ಷದುದ್ದಕ್ಕೂ ಪ್ರತಿದಿನ ನಿರಂತರವಾಗಿ ಭಕ್ತರ ಹೊಳೆ ಹರಿಯುತ್ತಿರುತ್ತದೆ. ವಿಶೇಷವಾಗಿ ಕಾರ್ತೀಕ ಪೂರ್ಣಿಮೆಯ ದಿನದಂದು ಮತ್ತು ಪಂಚುಕ ಹಬ್ಬದ ಸಂದರ್ಭದಲ್ಲಿ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಮಂದಿರಕ್ಕೆ ಭೇಟಿ ಕೊಡುತ್ತಾರೆ. ಕಟಕ್ ನಿಂದ ಮಂದಿರದವರೆಗೆ ಬಸ್ ಮತ್ತು ಕಾರುಗಳ ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ.