ಕಟಕ್ ನಿಂದ 10 ಕಿ.ಮೀ. ದೂರದಲ್ಲಿ ಚೌದವಾರ ಇದೆ. ಈ ಸ್ಥಳ ಧಾರ್ಮಿಕವಾಗಿ ಹಾಗು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿದೆ. ಚೌದವಾರ ಒಂದು ಕಾಲದಲ್ಲಿ ಯಶಸ್ವಿ ನಗರ ಎನಿಸಿಕೊಂಡಿತ್ತು. ಒರಿಸ್ಸಾದ ಸೋಮಕುಲಿ ಕೇಶರಿ ವಂಶದ ರಾಜರು ಚೌದವಾರನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಈ ನಗರದಿಂದಲೇ ಮಾಡುತ್ತಿದ್ದರು.
ಹಿಂದೂ ಧರ್ಮಗ್ರಂಥ ಮಹಾಭಾರತ ಕಾವ್ಯದ ಪ್ರಕಾರ, ದ್ರೌಪದಿ ಸಹಿತವಾಗಿ ಪಾಂಡವರು ಇದೇ ಸ್ಥಳದಲ್ಲಿ ಅಜ್ಞಾತವಾಸದ ಸಮಯದಲ್ಲಿ ಆಶ್ರಯವನ್ನು ಪಡೆದಿದ್ದರು. ಮಹಾದೇವನಾದ ಶಿವನ ಅಷ್ಟಪೀಠಗಳಿಗಾಗಿಯೂ ಪ್ರಸಿದ್ಧಿಪಡೆದಿದೆ. ಈ ಕಾರಣದಿಂದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭೇಟಿ ಕೊಡುತ್ತಾರೆ. ಕೇಶರಿ ಎಂಬ ವಂಶದ ರಾಜರು ಶಿವನ ಅಷ್ಟಪೀಠಗಳನ್ನು ಸ್ಥಾಪಿಸಿದ್ದರು. ಪ್ರಸ್ತುತ ಈ ಪೀಠಗಳು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೂ, ಶಿವನ ಭಕ್ತರು ಪೀಠದ ಅವಶೇಷಗಳನ್ನು ನೋಡಲು ಬರುತ್ತಾರೆ.