ಕಟಕ್ ಜಿಲ್ಲೆಯ ಬಡಂಬಾನಲ್ಲಿರುವ ಸಸಂಗಾ ಹಳ್ಳಿಯಲ್ಲಿ ಈ ಭಟ್ಟಾರಿಕ ಮಂದಿರ ಇದೆ. ಇದು ಕಟಕ್ ನಲ್ಲಿರುವ ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಹಿಂದೂ ದೇವತೆಗಳಾದ ಮಾತೆ ಭಟ್ಟಾರಿಕಾಗೆ ಈ ಮಂದಿರ ಸಮರ್ಪಿಸಲಾಗಿದೆ. ಈಕೆಯನ್ನು ಶಕ್ತಿಯ ಅಧಿದೇವತೆ ಎಂದು ಭಾವಿಸಿ ಪೂಜಿಸುತ್ತಾರೆ.
ರತ್ನಗಿರಿ ಬೆಟ್ಟದ ತಪ್ಪಲಿನಲ್ಲಿ, ಮಹಾನದಿಯ ನದಿಯ ತಟದಲ್ಲಿ ಈ ಮಂದಿರ ಉಪಸ್ಥಿತವಿದೆ. ನೈಸರ್ಗಿಕ ಸೌಂದರ್ಯ ಒಂದು ಕಡೆಯಾದರೆ, ಮತ್ತೊಂದು ಕಡೆ ಮಂದಿರದ ವೀಕ್ಷಣೆಯೇ ವೈಭವಯುತವಾಗಿದೆ. ಬಡಂಬಾದಲ್ಲಿರುವ ಭಟ್ಟಾರಿಕ ಶಕ್ತಿಪೀಠ ಹಿಂದೂಗಳಿಗೆ ಮಹತ್ವದ್ದಾಗಿದೆ. ಪುರಾಣದ ಪ್ರಕಾರ, ಮಾತೆ ದುರ್ಗೆಯು ಪರಶುರಾಮನನ್ನು ಹರಸಲು ಇದೇ ಸ್ಥಳದಲ್ಲಿ ಗೋಚರಿಸಿದ್ದಳು. ವರ್ಷವಿಡೀ ಅಸಂಖ್ಯಾತ ಭಕ್ತರು, ಸಂದರ್ಶನಕಾರರು ಬರುತ್ತಲೇ ಇರುತ್ತಾರೆ. ಯಾತ್ರಾಸ್ಥಳವಾದ್ದರಿಂದ ಹಲವು ರೀತಿಯ ಸಾರಿಗೆ ವ್ಯವಸ್ಥೆ ಈ ಮಂದಿರಕ್ಕೆ ಇದೆ.