ಸೀತಾಬನಿ ಎಂಬುದು ಒಂದು ಅರಣ್ಯ ಪ್ರದೇಶವಾಗಿದ್ದು, ಪಕ್ಷಿ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಅಲ್ಲದೆ ಇದು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸುತ್ತಾಡಲು ಇರುವ ಏಕೈಕ ಸ್ಥಳವಾಗಿದೆ. ಈ ಸ್ಥಳದಲ್ಲಿ ಪ್ರವಾಸಿಗರು ಒಂದು ನದಿ ಹಾಗು ವಾಲ್ಮೀಕಿ ದೇವಾಲಯವನ್ನು ನೋಡಬಹುದು. ನದಿ ದಂಡೆಯಲ್ಲಿ ಹಲವಾರು ಬಗೆಯ ಸರಿಸೃಪಗಳನ್ನು ಸಹ ನೋಡಬಹುದು. ದಂತಕಥೆಗಳ ಪ್ರಕಾರ, ಸೀತಾದೇವಿಯು ತಾನು ಬಹಿಷ್ಕಾರಗೊಂಡಾಗ ಕೆಲ ಸಮಯವನ್ನು ಇಲ್ಲಿ ಕಳೆದಿದ್ದಳಂತೆ.
ಈ ಪ್ರದೇಶವು ಕಾರ್ಬೆಟ್ ಹುಲಿ ಸಂರಕ್ಷಿತ ಅರಣ್ಯ ವಲಯದ ಆಡಳಿತದ ಅಡಿಗೆ ಸೇರುತ್ತದೆ. ಆದರು ಇದನ್ನು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಇದೊಂದು ಹುಲಿಗಳ, ಆನೆಗಳ, ಜಿಂಕೆಗಳ, ಸಾಂಬರ್ ಗಳ, ಬೊಗಳುವ ಜಿಂಕೆ, ಮುಳ್ಳುಹಂದಿ ಮತ್ತು ಕಾಳಿಂಗ ಸರ್ಪಗಳ ಪ್ರಾಕೃತಿಕ ಆವಾಸ ತಾಣವಾಗಿದೆ. ಸೀತಾಬನಿ ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿ ಆನೆ ಸಫಾರಿಗೆ ಬೇಕಾದ ಅಗತ್ಯ ಏರ್ಪಾಡುಗಳನ್ನು ಮಾಡುತ್ತದೆ.