ರಾಮ್ನಗರ್ ಎಂಬುದು ಒಂದು ಪಟ್ಟಣ. ಇದನ್ನು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಇದನ್ನು ಎಚ್. ರಾಮಸ್ವಾಮಿಯವರು 1856 ರಿಂದ 1884 ರ ನಡುವೆ ಈ ಊರನ್ನು ನಿರ್ಮಿಸಿದರು. ಇದು ನೈನಿತಾಲ್ ಜಿಲ್ಲೆಯ ಮುನಿಸಿಪಾಲ್ ಮಂಡಳಿಯಾಗಿ ಸೇವೆ ಸಲ್ಲಿಸುತ್ತಿದೆ. ಮಹಾಭಾರತದ ಕಾಲದಲ್ಲಿ ಇದು ಉತ್ತರ ಪಂಚಲದ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆಗ ಇದನ್ನು ಅಹಿಚ್ಛಾತ್ರ ಎಂದು ಕರೆಯಲಾಗುತ್ತಿತ್ತು.
ಈ ಪಟ್ಟಣವು ಚಮೋಲಿ ಮತ್ತು ಪಶ್ಚಿಮ ಕುಮಾವೂನ್ ಗೆ ಸಹ ಪ್ರವೇಶದ್ವಾರವಾಗಿ ಕಾರ್ಯ ನಿರ್ವಹಿಸುತ್ತದೆ. ಈ ಊರು ಇಲ್ಲಿರುವ ಬ್ರಿಟೀಷರ ಕಾಲದ ಟೀ ತೋಟಗಳಿಗೆ ಹೆಸರುವಾಸಿಯಾಗಿದ್ದೂ ಅಲ್ಲದೆ ಲಿಚಿ ಹಣ್ಣನ್ನು ಬೆಳೆಯುವ ಕಾರಣಕ್ಕೆ ರಾಮ್ನಗರವು ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಗಳಿಸಿದೆ. ಪ್ರವಾಸಿಗರು ಉಳಿದುಕೊಳ್ಳಲು ಇಲ್ಲಿ ಹಲವಾರು ಲಾಡ್ಜ್ ಗಳು ಮತ್ತು ಹೋಟೆಲ್ಗಳು ದೊರೆಯುತ್ತವೆ.