ಮಡಿಕೇರಿ ಕೋಟೆಯು ಮೂಲದಲ್ಲಿ ಮಣ್ಣಿನಿಂದ ಮಾಡಲ್ಪಟ್ಟಿದ್ದು, ಇದನ್ನು ಸುಮಾರು 17ನೇ ಶತಮಾನದ ಮಧ್ಯಭಾಗದಲ್ಲಿ ಮುದ್ದುರಾಜನಿಂದ ನಿರ್ಮಿಸಲ್ಪಟ್ಟಿತು. ಕೋಟೆಯ ಒಳಗೆ ಒಂದು ಅರಮನೆ ಕೂಡಾ ಇದೆ. ಈ ಕೋಟೆಯು ನಂತರದಲ್ಲಿ ಟಿಪ್ಪು ಸುಲ್ತಾನನಿಂದ ಮರುನಿರ್ಮಾಣಗೊಳ್ಳಲ್ಪಟ್ಟಿತು ಮತ್ತು ಇದಕ್ಕೆ ಗುಪ್ತ ಸುರಂಗಮಾರ್ಗವನ್ನೂ ಕೂಡಾ ಮಾಡಲಾಯಿತು. 1970ರಲ್ಲಿ, ದೊಡ್ಡವೀರ ರಾಜೇಂದ್ರ ಈ ಕೋಟೆಯನ್ನು ವಶಕ್ಕೆ ತೆಗೆದುಕೊಂಡರು. 1834ರಲ್ಲಿ ಬ್ರಿಟಿಷರ ವಶವಾಯಿತು. ನಂತರದಲ್ಲಿ 1812-1814೪ರ ಅವಧಿಯಲ್ಲಿ ಮತ್ತೊಮ್ಮೆ ಈ ಕೋಟೆ ಎರಡನೇ ಲಿಂಗರಾಜೇಂದ್ರ ಒಡೆಯರ್ರಿಂದ ಮರುನಿರ್ಮಾಣಗೊಂಡಿತು. ಈ ಪ್ರದೇಶದಲ್ಲಿ ರಾಜ ವಿಜಯರಾಜೇಂದ್ರರ ಕೆತ್ತನೆಗಳು ಮತ್ತು ಆಮೆಗಳ ಕೆತ್ತನೆಯನ್ನು ಹೊಂದಿದೆ. ರಾಜ ವೀರ ರಾಜರಿಂದ ಕೊಲ್ಲಲ್ಪಟ್ಟ ಎರಡು ಆನೆಗಳ ಎರಡು ನಿಜ ಗಾತ್ರದ ಕಲ್ಲಿನ ಪ್ರತಿಮೆಗಳು ಇವೆ.ಈ ಕೋಟೆಯು ಶೌರ್ಯದ ಕಥೆಯನ್ನು ಹೊಂದಿದೆ. ಕೋಟೆಯ ಒಳಗೆ ವೀರಭದ್ರ ದೇವಸ್ಥಾನವಿದೆ. ಈ ದೇವಸ್ಥಾನವನ್ನು 1855ರಲ್ಲಿ ಬ್ರಿಟಿಷರಿಂದ ಆಂಗ್ಲಿಕನ್ ಚರ್ಚ್ ನಿರ್ಮಾಣದ ಉದ್ದೇಶಕ್ಕೆ ಹಾಳುಮಾಡಲಾಗಿದೆ. ಗೊಥಿಕ್ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಸೇಂಟ್ ಮಾರ್ಕ್ಸ್ ಚರ್ಚ್ಗೆ ಗ್ಲಾಸ್ನ ಕಿಟಕಿಗಳಿವೆ. ಈ ರಚನೆಯನ್ನು ಎರಡು ಬಾರಿ ಮರುನಿರ್ಮಾಣ ಮಾಡಲಾಗಿದೆ. 1933ರಲ್ಲಿ ಗೋಪುರ ಗಡಿಯಾರ ಮತ್ತು ಕಮಿಷನರ್ ಕಾರನ್ನು ನಿಲ್ಲಿಸುವುದಕ್ಕೆ ಪೋರ್ಟಿಕೋವನ್ನು ನಿರ್ಮಾಣ ಮಾಡಲಾಗಿದೆ. ಎರಡು ಮಹಡಿಯಿರುವ ಈ ಕೋಟೆಯು 110 ಅಡಿ ದೊಡ್ಡದಾಗಿದೆ.ಇಂದು ಇದು ಭಾರತ ಸರ್ಕಾರದ ಪ್ರಾಚ್ಯವಸ್ತು ಇಲಾಖೆ ಅಡಿಯಲ್ಲಿ ಮ್ಯೂಸಿಯಂ ಆಗಿದೆ. ಈ ಕೋಟೆಯು ಕೆಲವು ಐತಿಹಾಸಿಕ ಕಲಾಕೃತಿಗಳಿಗೆ ಮತ್ತು ಒಂದು ಭಾಗವು ಫೀಲ್ಡ್ ಮಾರ್ಷಲ್ ಕಾರಿಯಪ್ಪಗೆ ಮೀಸಲಿಡಲಾಗಿದೆ. ಕೋಟೆಯ ಸಮೀಪದಲ್ಲಿರುವ ಇನ್ನೂ ಕೆಲವು ಆಕರ್ಷಕ ಪ್ರದೇಶಗಳೆಂದರೆ ಜಿಲ್ಲಾ ಜೈಲು, ಕೋಟೆ ಮಹಾಗಣಪತಿ ದೇವಸ್ಥಾನ ಮತ್ತು ಮಹಾತ್ಮಾಗಾಂಧಿ ಪಬ್ಲಿಕ್ ಲೈಬ್ರರಿಯಾಗಿದೆ. ಕೋಟೆ ಮಹಾಗಣಪತಿ ದೇವಸ್ಥಾನವು ಕೂಡಾ ಕೊಡಗಿನ ಪ್ರಮುಖ ದೇವಸ್ಥಾನಗಳಲ್ಲೊಂದು, ಇಲ್ಲಿ ಮಡಿಕೇರಿ ದಸರಾ ಹಬ್ಬದಲ್ಲಿ ತುಂಬಾ ಜನ ಸೇರುತ್ತಾರೆ.