ಸಮುದ್ರ ಮಟ್ಟದಿಂದ 2134 ಮೀಟರ್ ಎತ್ತರದಲ್ಲಿ ಉರ್ಗಂ ಕಣಿವೆಯಲ್ಲಿರುವ ಕಲ್ಪೇಶ್ವರ ಮಂದಿರದಲ್ಲಿ ಶಿವನ ಜಡೆ ಕೂದಲನ್ನು ಪೂಜಿಸಲಾಗುತ್ತದೆ. ಪಂಚ ಕೇದಾರ ತೀರ್ಥಕ್ಷೇತ್ರದ ಪಂಚಮ ಸ್ಥಾನದಲ್ಲಿರುವ ಈ ದೇವಾಲಯಕ್ಕೆ ವರ್ಷದ ಎಲ್ಲಾ ಕಾಲದಲ್ಲಿಯೂ ಭೇಟಿ ನೀಡಬಹುದು. ಸಣ್ಣ ಕಲ್ಲಿನ ಈ ದೇವಾಲಯವನ್ನು ತಲುಪಬೇಕಾದರೆ ಒಂದು ಗುಹೆಯದಾರಿಯ ಮೂಲಕ ಹಾದುಹೋಗಬೇಕು.
ಜನಪ್ರಿಯ ಋಷಿ ಅರ್ಘ್ಯರು ಈ ದೇವಸ್ಥಾನದಲ್ಲಿನ ಕಲ್ಪವೃಕ್ಷದ ಕೆಳಗೆ ಧ್ಯಾನಾಸಕ್ತರಾಗಿದ್ದರೆಂದೂ ಈ ಸ್ಥಳದಲ್ಲೇ ಅವರು ಊರ್ವಶಿ ಎಂಬ ಅಪ್ಸರೆಯನ್ನು ಸೃಷ್ಟಿಸಿದರೆಂದೂ ದಂತಕಥೆಯಿದೆ. ಈ ದೇವಾಲಯದ ಅರ್ಚಕರು ದಕ್ಷಿಣ ಭಾರತದ ನಂಬೂದಿರಿ ಬ್ರಾಹ್ಮಣರಾಗಿದ್ದು ಅವರು ಆದಿ ಗುರು ಶಂಕರಾಚಾರ್ಯರ ಅನುಯಾಯಿಗಳೆಂದು ಹೇಳಲಾಗುತ್ತದೆ.