ಶನಿವಾರಜಿ ದೇವಸ್ಥಾನಗಳು ಚಿತ್ತೋರಗಢದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇವುಗಳು ಶನಿವಾರಜಿಗೆ ಅರ್ಪಿತವಾದದ್ದು. ಶನಿವಾರಜಿಯನ್ನು ಕೃಷ್ಣನ ಇನ್ನೊಂದು ಅವತಾರ ಎಂದು ಹೇಳಲಾಗಿದೆ. ಈ ದೇವಸ್ಥಾನಗಳು ಉತ್ತರ ಭಾರತದ ಹಿಂದೂಗಳಿಗೆ ಅತ್ಯಂತ ಪ್ರಮುಖವಾಗಿದೆ. ಇಲ್ಲಿನ ಎರಡು ದೇವಸ್ಥಾನಗಳು ರಾಷ್ಟ್ರೀಯ ಹೆದ್ದಾರಿ 76 ರಲ್ಲಿದೆ. ಮೂರನೇ ದೇವಸ್ಥಾನವು ಭಡ್ಸೋಡಾ ಹಳ್ಳಿಯಲ್ಲಿದೆ. ಇದು ರಾ.ಹೆ 76 ರಿಂದ ಭಡ್ಸೋಡಾ ಕಡೆಗೆ 1 ಕಿ.ಮೀ ದೂರದಲ್ಲಿದೆ.ಈ ದೇವಸ್ಥಾನಗಳ ಹಿಂದೊಂದು ಆಸಕ್ತಿಕರ ಕತೆಯಿದೆ. ಇದನ್ನು ಸುಮಾರು 250 ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತದೆ. ಭಡ್ಸೊಡಾದಲ್ಲಿ ಒಬ್ಬ ದನಕಾಯುವ ಹುಡುಗನಾಗಿದ್ದ ಭೋಲಾರಾಮ್ ಗುರ್ಜರ್ ಎಂಬುವವನು 4 ಮೂರ್ತಿಗಳನ್ನು ಕಂಡನಂತೆ. ಈ ಮೂರ್ತಿಗಳು ಮಣ್ಣಿನಲ್ಲಿ ಹೂತಿತ್ತು. ನಂತರ ಇದನ್ನು ತೆಗೆಯಲಾಯಿತು. ಆದರೆ ಹೀಗೆ ತೆಗೆಯುವಾಗ ಒಂದು ಮೂರ್ತಿಯು ಹಾಳಾಯಿತು. ಮೂರು ಮೂರ್ತಿಗಳನ್ನು ಮೂರು ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಮೂರ್ತಿಗಳು ಸುಂದರವಾಗಿದ್ದು, ಕೃಷ್ಣ ಕೊಳಲನ್ನೂದುತ್ತಿರುವಂತಿದೆ. ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಬರುತ್ತಾರೆ.